<p><strong>ಕೋಲಾರ:</strong> ರಾಜ್ಯ ಯುವಜನ ಆಯೋಗ ರಚನೆ ಮಾಡುವಂತೆ ಒತ್ತಾಯಿಸಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಯುವ ಮುನ್ನಡೆ ತಂಡದಿಂದ ನಗರದಲ್ಲಿ ಶನಿವಾರ ಮಾನವ ಸರಪಳಿ ನಿರ್ಮಿಸಿದರು.</p>.<p>ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಿದ್ದಯ್ಯ ಬಿ.ಶಶಿರಾಜ್ ಮಾತನಾಡಿ, ‘ಸವಾಲುಗಳು ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಯುವಜನ ಆಯೋಗ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಯುವಜನರಿಗೆ ಶಿಕ್ಷಣದ ಹಕ್ಕು, ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯ ಹಕ್ಕು, ಉದ್ಯೋಗದ ಹಕ್ಕು, ಆರೋಗ್ಯದ ಹಕ್ಕು, ಅನನ್ಯತೆಯ ಹಕ್ಕು, ಘನತೆ ಮತ್ತು ಶೋಷಣೆ ರಹಿತ ಜೀವನ ನಡೆಸುವ ಹಕ್ಕು, ಆಯ್ಕೆಯ ಹಕ್ಕು ಮತ್ತು ಸಾಂಸ್ಕøತಿಕ ಹಕ್ಕುಗಳಿವೆ ಆದರೆ ಈ ಹಕ್ಕುಗಳ ಬಗ್ಗೆ ಅರಿಯುವ ಮತ್ತು ಹಕ್ಕುಗಳನ್ನು ಸಕಾರಗೊಳಿಸುವ ವ್ಯವಸ್ಥೆಗಳಾಗಬೇಕು’ ಎಂದು ಆಗ್ರಹಿಸಿದರು.</p>.<p>‘ಯುವಜನ ಸಬಲೀಕರಣ ಮತ್ತು ಯುವಜನ ಹಕ್ಕುಗಳ ಸಂರಕ್ಷಣೆಯ ಉದ್ದೇಶವುಳ್ಳ ಆಯೋಗವು ಯುವಜನರ ಪರ ಅಧ್ಯಯನ, ತನಿಖೆ, ಸಾರ್ವಜನಿಕ ಅರಿವು ಮತ್ತು ಸರಕಾರಕ್ಕೆ ಶಿಪಾರಸ್ಸುಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಇದರ ಕುರಿತು ಸರಕಾರ ವಿಶೇಷ ಗಮನ ಹರಿಸಬೇಕು’ ಎಂದರು.</p>.<p>ಸಂಘಟನೆಯ ಕಾರ್ಯಕರ್ತರಾದ ಸುನಿತಾ, ಅರವಿಂದ್, ರಿಯಾಜ್, ದೇವರಾಜ್, ಪ್ರದೀಪ್, ಗಣೇಶ್, ಅನುಷಾ, ಕೋಮಲ, ಲಾವಣ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ರಾಜ್ಯ ಯುವಜನ ಆಯೋಗ ರಚನೆ ಮಾಡುವಂತೆ ಒತ್ತಾಯಿಸಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಯುವ ಮುನ್ನಡೆ ತಂಡದಿಂದ ನಗರದಲ್ಲಿ ಶನಿವಾರ ಮಾನವ ಸರಪಳಿ ನಿರ್ಮಿಸಿದರು.</p>.<p>ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಿದ್ದಯ್ಯ ಬಿ.ಶಶಿರಾಜ್ ಮಾತನಾಡಿ, ‘ಸವಾಲುಗಳು ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಯುವಜನ ಆಯೋಗ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಯುವಜನರಿಗೆ ಶಿಕ್ಷಣದ ಹಕ್ಕು, ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯ ಹಕ್ಕು, ಉದ್ಯೋಗದ ಹಕ್ಕು, ಆರೋಗ್ಯದ ಹಕ್ಕು, ಅನನ್ಯತೆಯ ಹಕ್ಕು, ಘನತೆ ಮತ್ತು ಶೋಷಣೆ ರಹಿತ ಜೀವನ ನಡೆಸುವ ಹಕ್ಕು, ಆಯ್ಕೆಯ ಹಕ್ಕು ಮತ್ತು ಸಾಂಸ್ಕøತಿಕ ಹಕ್ಕುಗಳಿವೆ ಆದರೆ ಈ ಹಕ್ಕುಗಳ ಬಗ್ಗೆ ಅರಿಯುವ ಮತ್ತು ಹಕ್ಕುಗಳನ್ನು ಸಕಾರಗೊಳಿಸುವ ವ್ಯವಸ್ಥೆಗಳಾಗಬೇಕು’ ಎಂದು ಆಗ್ರಹಿಸಿದರು.</p>.<p>‘ಯುವಜನ ಸಬಲೀಕರಣ ಮತ್ತು ಯುವಜನ ಹಕ್ಕುಗಳ ಸಂರಕ್ಷಣೆಯ ಉದ್ದೇಶವುಳ್ಳ ಆಯೋಗವು ಯುವಜನರ ಪರ ಅಧ್ಯಯನ, ತನಿಖೆ, ಸಾರ್ವಜನಿಕ ಅರಿವು ಮತ್ತು ಸರಕಾರಕ್ಕೆ ಶಿಪಾರಸ್ಸುಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಇದರ ಕುರಿತು ಸರಕಾರ ವಿಶೇಷ ಗಮನ ಹರಿಸಬೇಕು’ ಎಂದರು.</p>.<p>ಸಂಘಟನೆಯ ಕಾರ್ಯಕರ್ತರಾದ ಸುನಿತಾ, ಅರವಿಂದ್, ರಿಯಾಜ್, ದೇವರಾಜ್, ಪ್ರದೀಪ್, ಗಣೇಶ್, ಅನುಷಾ, ಕೋಮಲ, ಲಾವಣ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>