'ಪೀಠತ್ಯಾಗದ ಬಗ್ಗೆ ಕೆದಕುವುದು ಬೇಡ. ಪಂಚಪೀಠ ಪರಂಪರೆಯಲ್ಲಿ ಗುರುವರ್ಗದ ಮಠ ಮತ್ತು ಶಿಷ್ಯ (ಪುತ್ರ) ವರ್ಗದ ಮಠ ಎಂಬ ಸಂಪ್ರದಾಯವಿದ್ದು, ಶಿಷ್ಯವರ್ಗ ಮಠದ ಪೀಠಾಧಿಪತಿಗಳು ಸಂಸಾರ ಹೊಂದಿ ಧಾರ್ಮಿಕ ಕೈಂಕರ್ಯ ನಡೆಸಬೇಕು. ಕೆಲ ಕಡೆ ಉತ್ತಮ ಮತ್ತು ಸಂಸ್ಕಾರವಂತ ವಟುಗಳನ್ನು ಗುರುತಿಸಿ ಶೀಷ್ಯವರ್ಗಕ್ಕೂ ಅದೇ ಕುಟುಂಬದವರನ್ನು ಸ್ವಾಮೀಜಿಗಳನ್ನಾಗಿ ಮಾಡಿದ್ದೇವೆ. ಅವರು ಮದುವೆಯಾಗಲು ಬರುವುದಿಲ್ಲ. ಸನ್ಯಾಸತ್ವ ನಿಭಾಯಿಸಲು ಶಕ್ತರಲ್ಲದಿದ್ದರೆ,ಭಕ್ತರ ಮತ್ತು ಹಿರಿಯರ ಸಮ್ಮುಖದಲ್ಲಿ ವಿಷಯ ತಿಳಿಸಿ ಪೀಠ ತ್ಯಜಿಸಿದರೆ ಅದಕ್ಕೆ ಯಾವ ಅಪವಾದವೂ ಇಲ್ಲ. ಈ ರೀತಿ ಮಾಡಿರುವುದು ಭಕ್ತರಿಗೆ ಮನಸ್ಸಿಗೆ ನೋವು ಉಂಟು ಮಾಡಿದೆ' ಎಂದರು.