ಕನಕಗಿರಿ: ಹಾವೇರಿ ಜಿಲ್ಲೆಯ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆ ನೀಡುವ ‘ಕನಕ-ಶರೀಫ’ ಕಾವ್ಯ ಪ್ರಶಸ್ತಿಗೆ ಪಟ್ಟಣದ ಗಜಲ್ ಕವಿ ಅಲ್ಲಾಗಿರಿರಾಜ ಆಯ್ಕೆಯಾಗಿದ್ದಾರೆ.
‘ಜನವರಿಯಲ್ಲಿ ನಡೆಯುವ ಸಾಹಿತ್ಯ, ಸಂಸ್ಕೃತಿ ಮತ್ತು ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಉತ್ತರ ಸಾಹಿತ್ಯ ವೇದಿಕೆ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಸತೀಶ ಕುಲಕರ್ಣಿ, ಡಾ.ನಾಗರಾಜ ದ್ಯಾವನಕೊಪ್ಪ. ಪ್ರೊ.ವಿರೂಪಾಕ್ಷಪ್ಪ ಹಾಗೂ ರಂಜಾನ ಕಿಲ್ಲೆದಾರ ತಿಳಿಸಿದ್ದಾರೆ.