ಹಿರೇಗೊಣ್ಣಾಗರ ಪಂಚಾಯಿತಿಯ ಯಮನಪ್ಪ ರಾಮತನಾಳ, ಮುದೇನೂರು ಪಂಚಾಯಿತಿ ವೆಂಕಟೇಶ್, ಹಾಬಲಕಟ್ಟಿಯ ಪಂಚಾಯಿತಿಯ ಚಂದಪ್ಪ ಕವಡಿಕಾಯಿ ಹಾಗೂ ತಳುವಗೇರಾ ಪಂಚಾಯಿತಿಯ ಶಿವಪುತ್ರಪ್ಪ ಬರಿದೆಲಿ ಅಮಾನತುಗೊಂಡ ಅಭಿವೃದ್ಧಿ ಅಧಿಕಾರಿಗಳು. ಹಗರಣ ತನಿಖಾ ಹಂತದಲ್ಲಿದ್ದರೂ ಈ ಪಿಡಿಒಗಳು ಗುತ್ತಿಗೆದಾರರಿಗೆ ಸಾಮಗ್ರಿ ವೆಚ್ಚ (ಬಿಒಸಿ) ಪಾವತಿಸಿದ್ದಾರೆ ಎಂದು ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.