ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಡೋಣ, ಮುಸ್ಟೂರ: ರೈತ ಬಂಧು ಅಭಿಯಾನ, ಜಾಗೃತಿ ಜಾಥಾ

Last Updated 7 ಆಗಸ್ಟ್ 2021, 10:47 IST
ಅಕ್ಷರ ಗಾತ್ರ

ಯರಡೋಣ, ಮುಸ್ಟೂರ (ಕಾರಟಗಿ): ’ರಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ಜಮೀನಿನ ಫಲವತ್ತತೆ ಕಡಿಮೆಯಾಗುವ ಅಪಾಯವಿದೆ. ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು‘ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎನ್. ನರಸಪ್ಪ ರೈತರಿಗೆ ಕರೆ ನೀಡಿದರು.

ತಾಲೂಕಿನ ಯರಡೋಣ ಗ್ರಾಮದಲ್ಲಿ ಪೌಷ್ಟಿಕ ತೋಟ ಮತ್ತು ರೈತ ಬಂಧು ವಿಶೇಷ ಅಭಿಯಾನದ ನಿಮಿತ್ಯ ಮನೆ, ಮನೆಗಳಿಗೆ ತೆರಳಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಜಾಗೃತಿ ಜಾಥಾಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶಗೌಡ ಹಾಗೂ ಕಾರಟಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಮೇಘಾಶ್ರೀ ಅವರು, ಯೋಜನೆಯ ಕುರಿತು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ, ನರೇಗಾ ಐಇಸಿ ಸಂಯೋಜಕ ಸೋಮನಾಥ್, ಕಾರ್ಯದರ್ಶಿ ಹನುಮಂತಪ್ಪ, ಸಿಬ್ಬಂದಿ ಗ್ಯಾನಪ್ಪ , ರಮೇಶ, ದೊಡ್ಡಬಸಪ್ಪ ಇದ್ದರು.

ಮುಷ್ಟೂರ: ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಮಹಿಳಾ ಕಾಯಕೋತ್ಸವದಡಿ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿದ್ದ ಮಹಿಳಾ ಕಾರ್ಮಿಕರಿಗೆ ರೈತ ಬಂಧು ಅಭಿಯಾನ ಕುರಿತು ಮಾಹಿತಿ ನೀಡಲಾಯಿತು.

ರೈತರು ಹತ್ತಿರದ ಗ್ರಾಮ ಪಂಚಾಯಿತಿ, ಕೃಷಿ ಇಲಾಖೆಗೆ ಭೇಟಿ ನೀಡಿ, ಕಾಮಗಾರಿಯ ನೋಂದಣಿ ಮಾಡಿಸಿ, ತಮ್ಮ ಹೊಲ, ಮನೆಗಳಲ್ಲಿ ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ನರೇಗಾ ಐಇಸಿ ಸಂಯೋಜಕ ಸೋಮನಾಥ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ಬಸವರಾಜ, ಅಭಿವೃದ್ದಿ ಅಧಿಕಾರಿ ಪ್ರಕಾಶ ಸಜ್ಜನ್‌ ಸಿಬ್ಬಂದಿ ಫಕೀರಪ್ಪ, ದೇವರಾಜ್, ಮಂಜುನಾಥ್, ಸೋಮನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT