ಕಾರಟಗಿ: ‘ಶಾಸಕ ಬಸವರಾಜ ದಢೇಸೂಗೂರು ಅವರ ನೇತೃತ್ವದಲ್ಲಿ ಈಚೆಗೆ ತಾಲ್ಲೂಕಿನ ಈಳಿಗನೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದವರು ಕಾಂಗ್ರೆಸ್ನವರಲ್ಲ’ ಎಂದು ಬ್ಲಾಕ್ ಕಾಂಗ್ರೆಸ್ ಎಸ್ಸಿ ಮೋರ್ಚಾ ಅಧ್ಯಕ್ಷ ಎಂ.ಶಿವಕುಮಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಶಾಸಕರ ನೇತೃತ್ವದಲ್ಲಿ 50 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದಾರೆಂಬುದು ಸುಳ್ಳು. ಅಲ್ಲಿ ಸೇರಿದ್ದು, ಬಿಜೆಪಿಯವರೇ ಆಗಿದ್ದಾರೆ’ ಎಂದು ಆರೋಪಿಸಿದರು. ಬ್ಲಾಕ್ ಕಾಂಗ್ರೆಸ್ನ ವಿವಿಧ ಘಟಕಗಳ ವೀರೇಶ ಈಳಿಗನೂರು, ಬಸವರಾಜ ಬಡಿಗೇರ, ಹುಲಗಪ್ಪ ಇದ್ದರು.