ಸಮ್ಮೇಳನದ ಸರ್ವಾಧ್ಯಕ್ಷರು ಕೆಲ ದಿನಗಳವರೆಗೆ ಸಮ್ಮೇಳನ ಮುಂದೂಡುವಂತೆ ಮನವಿ ಮಾಡಿದ್ದರು. ಪಟ್ಟಣದಲ್ಲಿ ಬುತ್ತಿಬಸವೇಶ್ವರ ಜಾತ್ರೆ ಇದೆ. ಅದೇ ರೀತಿ ತಾವರಗೇರಾದಲ್ಲಿಯೂ ಜಾತ್ರೆ ಇದೆ. ಈ ಕಾರಣಕ್ಕೆ ಸಮ್ಮೇಳನ ಮುಂದೂಡುವ ಬಗ್ಗೆ ಪ್ರಕಟಣೆ ನೀಡುವುದಾಗಿ ಒಂದು ವಾರದ ಹಿಂದೆಯೇ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ಅವರಿಗೆ ತಿಳಿಸಿದ್ದೆವು. ಆದರೆ ಪ್ರಕಟಣೆಗೆ ಜಿಲ್ಲಾ ಅಧ್ಯಕ್ಷರು ಅವಕಾಶ ನೀಡಲಿಲ್ಲ. ಆಮಂತ್ರಣ ಪತ್ರಿಕೆಗಳ ಮುದ್ರಣವೂ ಪೂರ್ಣಗೊಂಡಿಲ್ಲ. ಯಾವ ಸಿದ್ಧತೆಯೂ ನಡೆದಿಲ್ಲ ಎಂಬುದನ್ನು ಗಮನಕ್ಕೆ ತಂದ ನಂತರ ದಿನ ಮುಂದೂಡುವಂತೆ ಜಿಲ್ಲಾ ಘಟಕ ಸೂಚಿಸಿದೆ’ ಎಂದರು.