ಕೊಪ್ಪಳ: ’ನಾನು 4 ಬಾರಿ ಶಾಸಕ, ಒಂದು ಬಾರಿ ಸಂಸದನಾಗಿದ್ದು ವಿರೋಧ ಪಕ್ಷದವರು ಆರೋಪಿಸುವಂತೆ ಆಸ್ತಿ ಮಾಡಿದ್ದರೆ ಕೂಡಲೇ ಅವರು ತಾಯಿ ಹುಲಿಗೆಮ್ಮನ ದೇವಸ್ಥಾನಕ್ಕೆ ಬಂದು ಆಣೆ ಮಾಡಲಿ. ಅಲ್ಲಿ ಅವರ ಆಸ್ತಿ, ಸಾಲ ಎಷ್ಟು ಇದೆ ಎಂದು ಹೇಳಲಿ. ನಾನು ಸಹ ಎಲ್ಲವನ್ನೂ ಹೇಳುತ್ತೇನೆ. ಧೈರ್ಯ ಇದ್ದರೆ ಶಾಸಕ ರಾಘವೇಂದ್ರ ಹಿಟ್ನಾಳ ದೇವಸ್ಥಾನಕ್ಕೆ ಬರಲಿ‘ ಎಂದು ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಸವಾಲು ಹಾಕಿದರು.