ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ ಸಾವರ್ಕರ ಜನ್ಮದಿನ ಆಚರಣೆ

Published 28 ಮೇ 2023, 14:19 IST
Last Updated 28 ಮೇ 2023, 14:19 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಮಹಾವೀರ ವೃತ್ತ ಸಮೀಪದ ವೀರ ಸಾವರ್ಕರ ಮಾರ್ಗದಲ್ಲಿ ಭಾನುವಾರ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ವೀರ ಸಾವರ್ಕರ ಅವರ ಜನ್ಮದಿನ ಆಚರಿಸಲಾಯಿತು.

ಹಿಂದೂ ಪರ ಸಂಘಟನೆಗಳ ಮುಖಂಡ ಮಂಜುನಾಥ ಕಟ್ಟಿಮನಿ ಮಾತನಾಡಿ, ದೇಶದಲ್ಲಿ ಬ್ರಿಟಿಷರ ಆಳ್ವಿಕೆ ವೇಳೆ ಸಾಕಷ್ಟು ಸ್ವಾತಂತ್ರ್ಯ ಹೋರಾಟಗಾರರು ಜೀವ ಕಳೆದುಕೊಂಡಿದ್ದು, ಅದರಲ್ಲಿ ವೀರ ಸಾವರ್ಕರ ಸಹ ಒಬ್ಬರು ಎಂದು ಹೇಳಿದರು.

ನಂತರ ವೀರ ಸಾವರ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮದಿನ ಆಚರಣೆ ಮಾಡಲಾಯಿತು.

ಪ್ರಮುಖರಾದ ಸಿದ್ದು ಮುದ್ದೇಬಿಹಾಳ, ಮಂಜುನಾಥ ಹಿರೇಮಠ, ಆನಂದ್ ಕೋಟೆ, ಚಂದ್ರು ನಾಯಕ, ಚನ್ನಬಸಪ್ಪ ಕೆಂಗೇರಿ, ಗಿರೀಶ್ ನಾಯಕ, ಸರ್ವಜ್ಞ ಮೂರ್ತಿ, ಶ್ರವಣ ಕುಮಾರ ರಾಯ್ಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT