<p><strong>ತಾವರಗೇರಾ:</strong> ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ಶನಿವಾರ ಎತ್ತುಗಳಿಂದ 1.5 ಟನ್ ತೂಕದ ಕಲ್ಲನ್ನು ಎಳೆಯುವ ಸ್ಪರ್ಧೆ ನಡೆಯಿತು. </p>.<p>ಎಂ.ಗುಡದೂರು ನೀಲಕಂಠಯ್ಯ ತಾತ ಸ್ಪರ್ಧೆಗೆ ಚಾಲನೆ ನೀಡಿದರು. 10 ಜೋಡಿ ಎತ್ತುಗಳು ಭಾಗವಹಿಸಿದ್ದವು. <br><br> ಹಿರೇಬರಗೇರಾ ಗ್ರಾಮದ ರೈತ ಮಹಿಳೆಯ ಎತ್ತುಗಳು ಪ್ರಥಮ ಬಹುಮಾನ ಸ್ಥಾನ ಪಡೆದು 5 ಗ್ರಾಂ ಬಂಗಾರ ಪಡೆದುಕೊಂಡಿದ್ದು, ತಾವರಗೇರಾದ ರೈತ ಸತ್ತಾರ್ ಸಾಬ್ ಮುಲ್ಲಾರ್ ಎತ್ತುಗಳು ದ್ವಿತೀಯ ಬಹುಮಾನ ಪಡೆದು 15 ತೊಲ ಬೆಳ್ಳಿ, ಹೊಸೂರು ಗ್ರಾಮದ ಶ್ಯಾಮಣ್ಣ ಮಾಳಗಿಯವರ ಎತ್ತುಗಳು ತೃತೀಯ ಸ್ಥಾನ ಪಡೆದ 11 ತೊಲ ಬೆಳ್ಳಿ ಪಡೆದುಕೊಂಡವು. <br><br> ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲ್ತವಾಡ, ಪ.ಪಂ ಸದಸ್ಯ ಕರಡೆಪ್ಪ ನಾಲ್ತವಾಡ, ಪ್ರಮುಖರಾದ ಶ್ಯಾಮೀದಸಾಬ್ ನಾಲಬಂದಾ, ವಿರುಪಣ್ಣ ನಾಲ್ತವಾಡ, ಬಸವರಾಜ ಪೂಜಾರ, ಮತ್ತು ವೀರಭದ್ರೇಶ್ವರ ಜಾತ್ರಾ ಸಮಿತಿ ಸದಸ್ಯರು, ರೈತರು ಸ್ಥಳೀಯ ಎಪಿಎಂಸಿ ಸಿಬ್ಬಂದಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾವರಗೇರಾ:</strong> ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ಶನಿವಾರ ಎತ್ತುಗಳಿಂದ 1.5 ಟನ್ ತೂಕದ ಕಲ್ಲನ್ನು ಎಳೆಯುವ ಸ್ಪರ್ಧೆ ನಡೆಯಿತು. </p>.<p>ಎಂ.ಗುಡದೂರು ನೀಲಕಂಠಯ್ಯ ತಾತ ಸ್ಪರ್ಧೆಗೆ ಚಾಲನೆ ನೀಡಿದರು. 10 ಜೋಡಿ ಎತ್ತುಗಳು ಭಾಗವಹಿಸಿದ್ದವು. <br><br> ಹಿರೇಬರಗೇರಾ ಗ್ರಾಮದ ರೈತ ಮಹಿಳೆಯ ಎತ್ತುಗಳು ಪ್ರಥಮ ಬಹುಮಾನ ಸ್ಥಾನ ಪಡೆದು 5 ಗ್ರಾಂ ಬಂಗಾರ ಪಡೆದುಕೊಂಡಿದ್ದು, ತಾವರಗೇರಾದ ರೈತ ಸತ್ತಾರ್ ಸಾಬ್ ಮುಲ್ಲಾರ್ ಎತ್ತುಗಳು ದ್ವಿತೀಯ ಬಹುಮಾನ ಪಡೆದು 15 ತೊಲ ಬೆಳ್ಳಿ, ಹೊಸೂರು ಗ್ರಾಮದ ಶ್ಯಾಮಣ್ಣ ಮಾಳಗಿಯವರ ಎತ್ತುಗಳು ತೃತೀಯ ಸ್ಥಾನ ಪಡೆದ 11 ತೊಲ ಬೆಳ್ಳಿ ಪಡೆದುಕೊಂಡವು. <br><br> ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲ್ತವಾಡ, ಪ.ಪಂ ಸದಸ್ಯ ಕರಡೆಪ್ಪ ನಾಲ್ತವಾಡ, ಪ್ರಮುಖರಾದ ಶ್ಯಾಮೀದಸಾಬ್ ನಾಲಬಂದಾ, ವಿರುಪಣ್ಣ ನಾಲ್ತವಾಡ, ಬಸವರಾಜ ಪೂಜಾರ, ಮತ್ತು ವೀರಭದ್ರೇಶ್ವರ ಜಾತ್ರಾ ಸಮಿತಿ ಸದಸ್ಯರು, ರೈತರು ಸ್ಥಳೀಯ ಎಪಿಎಂಸಿ ಸಿಬ್ಬಂದಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>