ಆ.2 ರಿಂದ 12ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಯಲಿದೆ. ಈ ಬಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಳಲಿದ ರೋಗಿಗಳು ಹಾಗೂ ಮನೆಯ ಸಂಪರ್ಕಿತರಲ್ಲಿ ಕ್ಷಯರೋಗದ ಲಕ್ಷಣ ಕಂಡುಬಂದಲ್ಲಿ ಅಂಥವರನ್ನು ಕ್ಷಯರೋಗ ಪರೀಕ್ಷೆಗೆ ಒಳಪಡಿಸಬೇಕು. ಕ್ಷಯರೋಗಿಗಳ ಸಂಪರ್ಕಿತರ ಮೇಲೆ ಹೆಚ್ಚಿನ ನಿಗಾವಹಿಸಿ ಪತ್ತೆ ಹಚ್ಚಿ, ಕ್ಷ-ಕಿರಣ ಪರೀಕ್ಷೆಗೆ ಒಳಪಡಿಸಬೇಕು. ಕ್ಷ-ಕಿರಣದ ಫಲಿತಾಂಶವನ್ನು ಕೃತಕ ಬುದ್ಧಿವಂತಿಕೆಯ ಆಧಾರದ ಮೇಲೆ ಅಸಹಜತೆ ಮತ್ತು ಸಂಶಯಾಸ್ಪದ ಕುರುಹುಗಳಿದ್ದಲ್ಲಿ ನಾಟ್ ಕಫ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು. ಕ್ಷಯಮುಕ್ತ ಕೆಲಸದ ಸ್ಥಳ ಅಭಿಯಾನವನ್ನು ಆದ್ಯತೆ ಮೇರೆಗೆ ಕಾರ್ಖಾನೆ, ರೈಸ್ಮಿಲ್ ಹಾಗೂ ಹೋಟೆಲ್ನಲ್ಲಿ ಮಾಡಬೇಕು. ಕಾರ್ಮಿಕರು,ಶಾಲಾ ಮಕ್ಕಳಿಗೆಕ್ಷಯರೋಗ ತಪಾಸಣೆ ಮತ್ತು ಪತ್ತೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ಸಮುದಾಯದ ಸಹಭಾಗಿತ್ವದಿಂದ ಮೇಲ್ವಿಚಾರಣೆ ಹೆಚ್ಚಿಸಲು ಕ್ಷಯರೋಗಿಗಳ ಕೇಂದ್ರೀಕೃತ ಆರೈಕೆ ನೀಡುವಂತೆ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಿಇಒಫೌಜಿಯಾ ತರನ್ನುಮ್,ಡಿಎಚ್ಒಡಾ. ಟಿ.ಲಿಂಗರಾಜು, ಆರ್.ಸಿ.ಎಚ್ ಅಧಿಕಾರಿ ಡಾ.ಜಂಬಯ್ಯ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ ಎಂ.ಜಿ.ಮುಂತಾದವರು ಇದ್ದರು.