ಮಹಿಳಾ ಮುಂದಾಳುಗಳಾದ ಷರೀಫಾ, ಪಚ್ಚೆಮ್ಮ ಕುಂಬಾರ, ಹೊನ್ನೂರುಬೀ, ಮಮತಾಜ್ ಬೇಗಂ ಗಂಗಾವತಿ, ಲಕ್ಷ್ಮೀದೇವಿ ಮಾತನಾಡಿ,‘ಪಟ್ಟಣದ ಕೆಲ ವಾರ್ಡ್ಗಳ ಮಹಿಳೆಯರು ಅನೇಕ ವರ್ಷಗಳಿಂದ ಈ ಶೌಚಾಲಯ ಬಳಕೆ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದಲೂ ಜಾಲಿ ಬೆಳೆದು ತೊಂದರೆಯಾಗಿದೆ. ಈಚೆಗೆ ಮಳೆ ನೀರು ನಿಂತು ಸಮಸ್ಯೆ ಉಂಟಾಗಿದೆ’ ಎಂದು ಅವರು ಹೇಳಿದರು.