ಎರಡು ದಿನಗಳಿಂದ ಈ ಭಾಗದಲ್ಲಿ ನಿರಂತರ ಮಳೆ ಬರುತ್ತಿದ್ದರೂ ಈ ಡ್ಯಾಂನಲ್ಲಿ ಮಾತ್ರ ನೀರು ನಿಲ್ಲದೆ ಡ್ಯಾಂ ಪಕ್ಕದಲ್ಲಿ ಒಡೆದಿರುವ ಭಾಗದಿಂದ ಹರಿದು ವ್ಯರ್ಥವಾಗಿ ಹಳ್ಳ ಸೇರುತ್ತಿದೆ. ಜಲಾಯನ ಅಭಿವೃದ್ಧಿ ಯೋಜನೆಯಡಿಯಲ್ಲಿ ಒಂದು ವರ್ಷದ ಹಿಂದೆ ನಿರ್ಮಾಣವಾಗಿರುವ ಈ ಚೆಕ್ಡ್ಯಾಂ ಕಟ್ಟಡದ ಪಕ್ಕದಲ್ಲಿ ಭದ್ರ ಗೋಡೆ ನಿರ್ಮಿಸದೇ ಇರುವ ಕಾರಣವಾಗಿ ನೀರಿನ ರಭಸಕ್ಕೆ ಮಣ್ಣಿನ ಗೋಡೆ ಕೊಚ್ಚಿ ಹೋಗಿದೆ. ‘ಇಲ್ಲಿ ನೀರು ನಿಂತಿದ್ದರೆ, ವರ್ಷದ ವರೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಆಶ್ರಯ ದೊರಕುತ್ತಿತ್ತು, ಕಳಪೆ ಕಾಮಗಾರಿಯಿಂದ ಹಣ ವ್ಯರ್ಥ, ನೀರು ಹಾಳಾಯಿತು’ ಎನ್ನು್ತಾರೆ ಕುರಿಗಾಹಿ ಹನುಮಂತಪ್ಪ ಕಬ್ಬರಗಿ.