<p><strong>ಗಂಗಾವತಿ: </strong>ಬೇರೆ ರಾಜ್ಯಗಳಲ್ಲಿನ ಜನರು ಹೊಂದಿರುವ ಅಲ್ಲಿನ ನಾಡು, ನುಡಿ ಮತ್ತು ಭಾಷೆಯ ಬಗೆಗಿನ ಅಭಿಮಾನಕ್ಕೆ ಹೋಲಿಸಿದರೆ ಕನ್ನಡಿಗರು ಸ್ವಾಭಿಮಾನಿಗಳಲ್ಲ ಎಂಬ ನಿಲುವಿಗೆ ಬರಬೇಕಾಗುತ್ತದೆ ಎಂದು ಹಿರಿಯ ಬಂಡಾಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. <br /> <br /> ನಗರದ ಅಮರ ವಸತಿ ನಿಲಯದ ಹಿಂಭಾಗದಲ್ಲಿರುವ ಕನ್ನಡಸೇನೆ ಕರ್ನಾಟಕ ಸಂಘಟನೆಯ ತಾಲ್ಲೂಕು ಕಚೇರಿಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಘಟಕದ ಎರಡನೇ ವಾರ್ಷಿಕೋತ್ಸವದಲ್ಲಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು.<br /> <br /> ಕನ್ನಡಪರ ಸಂಘಟನೆಗಳು, ನಾಡಿನ, ನೆಲ-ಜಲ ಭಾಷೆಗೆ ದಕ್ಕೆ ಬಂದರೆ ಹೋರಾಡುವ ಉದ್ದೇಶಕ್ಕೆ ಈಗಾಗಲೆ ರಾಜ್ಯದಲ್ಲಿ ಹಲವಾರು ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಬೇರೆ ಯಾವ ರಾಜ್ಯದಲ್ಲೂ ರಾಜ್ಯದ ನೆಲ-ಜಲ ಭಾಷೆಯ ಉಳಿವಿಗೆ ಹೋರಾಡುವ ಸ್ಥಿತಿ ಬಂದಿಲ್ಲ.<br /> <br /> ಅಲ್ಲಿನ ಜನರು ತಮ್ಮ ತಾಯ್ನಾಡು ಮತ್ತು ಮಾತೃಭಾಷೆಯ ಬಗ್ಗೆ ಅಷ್ಟೊಂದು ಕಳಕಳಿ ಹೊಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಆ ಕೆಲಸವಾಗುತ್ತಿಲ್ಲ. ಬೆಂಗಳೂರಿನಂತ ಮಹಾನಗರದಲ್ಲಿ ಕನ್ನಡಿಗರೇ ಪರಕೀಯರಾಗುವಂತ ಸ್ಥಿತಿ ಬಂದೋದಗಿದೆ ಎಂದು ಆತಂಕ ವ್ಯಕ್ತಪಡಿಸಿದರು. <br /> <br /> ಕನ್ನಡ ನಾಡಿನ ಜನರ ಆಶಯಕ್ಕೆ ತಕ್ಕಂತೆ ನಾಡಿನ ಹಿತ ಕಾಪಾಡುವ ಜವಾಬ್ದಾರಿ ಹೊತ್ತ ಹಲವಾರು ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ. ಅದರಲ್ಲಿ ಕನ್ನಡ ಸೇನೆಯೂ ಒಂದು. ಸೇನೆ ಎಂದರೆ ಸನ್ನದ್ಧ ತಂಡ ಎಂದರ್ಥ. ಯಾವಾಗಲೂ ಯುದ್ಧಕ್ಕೆ ಸಿದ್ಧರಿರಬೇಕೆಂದು ವಿಠ್ಠಪ್ಪ ಕರೆ ನೀಡಿದರು.<br /> <br /> ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡ ಮಾತನಾಡಿದರು. ಉದ್ಯಮಿಗಳಾದ ಸುರೇಶ ಸಿಂಗನಾಳ, ಎನ್. ಸೂರಿಬಾಬು, ವೆಂಕಟೇಶ್ವರರಾವ್ ಶಿಕ್ಷಕರಾದ ಮಲ್ಲನಗೌಡ, ಖಾದರಸಾಬ ಹುಲ್ಲೂರು ಸಂಘಟನೆಯ ಚನ್ನಪ್ಪ ಮಾಳಗಿ, ಚನ್ನಬಸವ ಜೇಕಿನ್, ಮಹೇಶ ಸಿಂಗನಾಳ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಬೇರೆ ರಾಜ್ಯಗಳಲ್ಲಿನ ಜನರು ಹೊಂದಿರುವ ಅಲ್ಲಿನ ನಾಡು, ನುಡಿ ಮತ್ತು ಭಾಷೆಯ ಬಗೆಗಿನ ಅಭಿಮಾನಕ್ಕೆ ಹೋಲಿಸಿದರೆ ಕನ್ನಡಿಗರು ಸ್ವಾಭಿಮಾನಿಗಳಲ್ಲ ಎಂಬ ನಿಲುವಿಗೆ ಬರಬೇಕಾಗುತ್ತದೆ ಎಂದು ಹಿರಿಯ ಬಂಡಾಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. <br /> <br /> ನಗರದ ಅಮರ ವಸತಿ ನಿಲಯದ ಹಿಂಭಾಗದಲ್ಲಿರುವ ಕನ್ನಡಸೇನೆ ಕರ್ನಾಟಕ ಸಂಘಟನೆಯ ತಾಲ್ಲೂಕು ಕಚೇರಿಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಘಟಕದ ಎರಡನೇ ವಾರ್ಷಿಕೋತ್ಸವದಲ್ಲಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು.<br /> <br /> ಕನ್ನಡಪರ ಸಂಘಟನೆಗಳು, ನಾಡಿನ, ನೆಲ-ಜಲ ಭಾಷೆಗೆ ದಕ್ಕೆ ಬಂದರೆ ಹೋರಾಡುವ ಉದ್ದೇಶಕ್ಕೆ ಈಗಾಗಲೆ ರಾಜ್ಯದಲ್ಲಿ ಹಲವಾರು ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಬೇರೆ ಯಾವ ರಾಜ್ಯದಲ್ಲೂ ರಾಜ್ಯದ ನೆಲ-ಜಲ ಭಾಷೆಯ ಉಳಿವಿಗೆ ಹೋರಾಡುವ ಸ್ಥಿತಿ ಬಂದಿಲ್ಲ.<br /> <br /> ಅಲ್ಲಿನ ಜನರು ತಮ್ಮ ತಾಯ್ನಾಡು ಮತ್ತು ಮಾತೃಭಾಷೆಯ ಬಗ್ಗೆ ಅಷ್ಟೊಂದು ಕಳಕಳಿ ಹೊಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಆ ಕೆಲಸವಾಗುತ್ತಿಲ್ಲ. ಬೆಂಗಳೂರಿನಂತ ಮಹಾನಗರದಲ್ಲಿ ಕನ್ನಡಿಗರೇ ಪರಕೀಯರಾಗುವಂತ ಸ್ಥಿತಿ ಬಂದೋದಗಿದೆ ಎಂದು ಆತಂಕ ವ್ಯಕ್ತಪಡಿಸಿದರು. <br /> <br /> ಕನ್ನಡ ನಾಡಿನ ಜನರ ಆಶಯಕ್ಕೆ ತಕ್ಕಂತೆ ನಾಡಿನ ಹಿತ ಕಾಪಾಡುವ ಜವಾಬ್ದಾರಿ ಹೊತ್ತ ಹಲವಾರು ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ. ಅದರಲ್ಲಿ ಕನ್ನಡ ಸೇನೆಯೂ ಒಂದು. ಸೇನೆ ಎಂದರೆ ಸನ್ನದ್ಧ ತಂಡ ಎಂದರ್ಥ. ಯಾವಾಗಲೂ ಯುದ್ಧಕ್ಕೆ ಸಿದ್ಧರಿರಬೇಕೆಂದು ವಿಠ್ಠಪ್ಪ ಕರೆ ನೀಡಿದರು.<br /> <br /> ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡ ಮಾತನಾಡಿದರು. ಉದ್ಯಮಿಗಳಾದ ಸುರೇಶ ಸಿಂಗನಾಳ, ಎನ್. ಸೂರಿಬಾಬು, ವೆಂಕಟೇಶ್ವರರಾವ್ ಶಿಕ್ಷಕರಾದ ಮಲ್ಲನಗೌಡ, ಖಾದರಸಾಬ ಹುಲ್ಲೂರು ಸಂಘಟನೆಯ ಚನ್ನಪ್ಪ ಮಾಳಗಿ, ಚನ್ನಬಸವ ಜೇಕಿನ್, ಮಹೇಶ ಸಿಂಗನಾಳ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>