ಒಂದು ವರ್ಷದ ಹಿಂದೆ ಹೊಸಳ್ಳಿ ಗ್ರಾಮದ ಬಳಿ ಇರುವ ನೀರಾವರಿ ಕೆರೆಯಲ್ಲಿನ ಹೂಳು ತೆಗೆಯುವುದಕ್ಕೆ ಈ ಪಂಚಾಯಿತಿಯಿಂದ ನೂರಾರು ಕೂಲಿಕಾರರನ್ನು ಟ್ರ್ಯಾಕ್ಟರ್ ಮೂಲಕ ಕರೆದೊಯ್ಯುವ ಮತ್ತು ಕೆರೆ ಹೂಳನ್ನು ವಿಲೇವಾರಿ ಮಾಡುವ ಕೆಲಸ ನಿರ್ವಹಿಸಲಾಗಿತ್ತು. ಗ್ರಾಮದ ಐದು ಟ್ರ್ಯಾಕ್ಟರ್ಗಳಿಗೆ ತಲಾ ₹ 38,000 ಬಾಡಿಗೆ ಹಣ ನೀಡಬೇಕಿದ್ದು ಇಲ್ಲಿಯವರೆಗೂ ಪಂಚಾಯಿತಿ ಹಣ ಪಾವತಿಸಿಲ್ಲ. ಈ ಬಗ್ಗೆ ಹಲವು ಬಾರಿ ಕೇಳಿದರೂ ಸ್ಪಂದಿಸಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.