ಮುನಿರಾಬಾದ್: ಸಮೀಪದ ಶಿವಪುರ–ಮಹ್ಮದ್ನಗರ ರಸ್ತೆಯಲ್ಲಿ ಕವಳಿ ಗ್ರಾಮದ ಹತ್ತಿರ ಭತ್ತದ ಹುಲ್ಲಿನ ಬಣವೆಗಳನ್ನು ರಸ್ತೆ ಬದಿ ಸಂಗ್ರಹಿಸಲಾಗಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು ಜೊತೆಗೆ ಬೆಂಕಿ ಅನಾಹುತ ಸಂಭವಿಸುವ ಅಪಾಯವೂ ಎದುರಾಗಿದೆ.
ರಸ್ತೆಯ ಒಂದು ಬದಿ ಬಣವೆಗಳು ಆಕ್ರಮಿಸಿಕೊಂಡಿವೆ. ಇಲ್ಲಿ ಓಡಾಡುವ ವಾಹನಗಳ ಸೈಲೆನ್ಸರ್ ಕೊಳವೆಯಿಂದ ಅಥವಾ ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ಸೇದಿ ಬಿಸಾಡುವ ಬೀಡಿ, ಸಿಗರೇಟ್ ತುಂಡುಗಳಿಂದ ಆಕಸ್ಮಿಕವಾಗಿ ಬೆಂಕಿಯ ಕಿಡಿ ಏನಾದರೂ ಹಾರಿ ಬಣವೆಗೆ ತಗುಲಿದರೆ ಸಾಲಾಗಿ ಸಂಗ್ರಹಿಸ ಲಾಗಿರುವ ಎಲ್ಲಾ ಬಣವೆಗಳು ಬೆಂಕಿಯ ಜ್ವಾಲೆಗೆ ಬಲಿಯಾಗುವ ಸಾಧ್ಯತೆಯಿದೆ.
ಎರಡೂ ಗ್ರಾಮಗಳ ಸ್ಥಳೀಯ ಆಡಳಿತವಾದ ಗ್ರಾ.ಪಂ ಇದರ ಕಡೆ ಗಮನಹರಿಸಿ ಬಣವೆಗಳ ಸ್ಥಳಾಂತರಿಸಬೇಕು. ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಬೆಂಕಿ ಅವ ಘಡ ಸಂಭವಿಸುವ ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.