ಪತಂಜಲಿ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ನೂತನ ಶಾಸಕ ಅಮರೇಗೌಡ ಬಯ್ಯಾಪುರ ಹಾಗೂ ಮುದೇನೂರು ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ವೀರೇಶ ಬಂಗಾರಶೆಟ್ಟರ್, ತಾಲ್ಲೂಕು ಪ್ರಭಾರಿ ಅಚಲಾರಾಂ, ಮಹಿಳಾ ಘಟಕದ ಪ್ರಭಾರಿ ಕುಸುಮಾ ಶ್ಯಾಟಿ, ಯುವ ಘಟಕದ ಪ್ರಭಾರಿ ಕುಮಾರ ಬಡಿಗೇರ, ಲತಾ ಸ್ಥಾವರಮಠ, ಭಾರತಿ ಶೆಟ್ಟಿ, ಶಿವಲೀಲಾ ದಾವಣಗೆರೆ ಮತ್ತು ಅನೇಕ ಶಿಬಿರಾರ್ಥಿಗಳು ಇದ್ದರು. ಕೆ.ಬಿ.ಸ್ಥಾವರಮಠ ನಿರೂಪಿಸಿದರು.