ಹನುಮಸಾಗರ: ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶೈಕ್ಷಣಿಕ ಸಂಸ್ಥೆಗಳು ಶ್ರಮಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಮಂಗಳವಾರ ಇಲ್ಲಿಯ ಅನ್ನದಾನೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ₹4 ಲಕ್ಷ ವೆಚ್ಚದಲ್ಲಿ ಬಿಸಿಯೂಟ ಕೊಠಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಿಗೆ ನೀಡುವ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ ಸೌಲಭ್ಯಗಳನ್ನು ಅನುದಾನಿತ ಶಾಲೆಗಳಿಗೂ ನೀಡುತ್ತಿದ್ದು, ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಮುಖಂಡ ಬಸವರಾಜ ಹಳ್ಳೂರ ಮಾತನಾಡಿ, ಶಾಸಕರ ಅನುದಾನದಲ್ಲಿ ಹನುಮಸಾಗರಕ್ಕೆ ಸಾಕಷ್ಟು ಯೋಜನೆಗಳನ್ನು ಮಂಜೂರಾಗಿದೆ.
ಹೈಮಾಸ್ಟ್ ವಿದ್ಯುದ್ದೀಪ, ಡಬಲ್ ರಸ್ತೆ ಕಾಮಗಾರಿ, ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಶೀಘ್ರ ಈ ಎಲ್ಲಾ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಸಿದ್ದಯ್ಯ ಬಾಳಿಹಳ್ಳಿಮಠ, ಉಪಾಧ್ಯಕ್ಷ ಸಿದ್ದಣ್ಣ ಚಿನಿವಾಲರ, ಕಾರ್ಯದರ್ಶಿ ಮಲ್ಲಯ್ಯ ಕೋಮಾರಿ, ನಿರ್ದೇಶಕ ಕರಿಸಿದ್ದಪ್ಪ ಕುಷ್ಟಗಿ, ಗದಿಗೆಪ್ಪ ಬ್ಯಾಳಿ, ಶ್ರೀಶೈಲ್ ಮೋಟಗಿ, ಅಮರಯ್ಯ ವಿಭೂತಿ, ವಿ.ಎಚ್. ನಾಗೂರ, ಸಕ್ರಪ್ಪ ಬಿಂಗಿ, ಮಹಿಬೂಬಸಾಬ ಮೂಲಿಮನಿ, ಕಾಳಪ್ಪ ಕುಷ್ಟಗಿ, ಗ್ರಾ.ಪಂ. ಸದಸ್ಯ ಪ್ರಹ್ಲಾದ ಕಟ್ಟಿ, ಶಿವಪುತ್ರಪ್ಪ ಕೋಳೂರ, ಪಿಡಿಓ ನಿಂಗಪ್ಪ ಮೂಲಿಮನಿ, ಮುಖ್ಯಶಿಕ್ಷಕ ಶರಣಪ್ಪ ಚಿನಿವಾಲರ, ಮಹೇಶ ಮಠಪತಿ ಮತ್ತಿತರರು ಇದ್ದರು.