ನಗರದ ಹೊರವಲಯ ಶರಣಬಸವೇಶ್ವರ ಕ್ಯಾಂಪಿನ ಮರಳಿ ಕಂದಾಯ ವೃತ್ತದ ಭಟ್ಟರಹಂಚಿನಾಳ ಗ್ರಾಮದ ಸರ್ವೇ ನಂಬರ್ 60ರಲ್ಲಿ ರಾಜಾಸಾಬ ಕಾಸೀಂಸಾಬ ವಡ್ಡರಹಟ್ಟಿ ಎಂಬ ರೈತ, ಜಮೀನು ಗುತ್ತಿಗೆ ಪಡೆದು 8.11 ಎಕರೆಯಲ್ಲಿ ಮೆಕ್ಕೆ ಜೋಳ ಬೆಳೆದಿದ್ದರು. ಫಸಲು ಸಮೃದ್ಧವಾಗಿ ಬೆಳೆದು ನಿಂತು ಕೊಯ್ಲು ಮಾಡಿಕೊಳ್ಳಬೇಕಿತ್ತು. ಅಷ್ಟರಲ್ಲಿ ಹಂದಿಗಳು ದಾಳಿ ಮಾಡಿ ಮೆಕ್ಕೆಜೋಳ ತಿಂದು ಹಾಕಿವೆ.