<p><strong>ಭಾರತೀನಗರ: </strong>ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆಬೆಳ್ಳೂರುವಿನಲ್ಲಿ ಕೊಕ್ಕರೆಗಳ ಸಾವು ತಡೆಗಟ್ಟುವ ಕ್ರಮವಾಗಿ ₹ 1.30 ಕೋಟಿ ವೆಚ್ಚದಲ್ಲಿ ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ.</p>.<p>ಕೊಕ್ಕರೆಬೆಳ್ಳೂರಿಗೆ ವಲಸೆ ಬರುವ ಕೊಕ್ಕರೆಗಳು ನೀರು, ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಕೆರೆಗಳನ್ನು ಆಶ್ರಯಿಸಿವೆ. ಶಿಂಷಾ ನದಿ, ಸೂಳೆಕೆರೆ ಸೇರಿ ಸುತ್ತಮುತ್ತಲ ಗ್ರಾಮಗಳ ಕೆರೆಗಳು ಕೊಕ್ಕರೆಗಳ ಆಹಾರದ ಮೂಲವಾಗಿದೆ.</p>.<p>ಪ್ರಸ್ತುತ ಈ ಕೆರೆಗಳು ನೀರಿನ ಸೆಲೆ ಕಲುಷಿತ ಗೊಂಡಿದೆ. ಇದು ಕೊಕ್ಕರೆಗಳ ಸಾವಿಗೆ ಕಾರಣವಾಗಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಪ್ರಸ್ತುತ ಮಾದರಹಳ್ಳಿ ಸಮೀಪದ ಸೂಳೆಕೆರೆಯಲ್ಲಿ 3 ಕೊಕ್ಕರೆಗಳು, 2 ನೀರು ಕೋಳಿಗಳು ಸತ್ತಿರುವುದು ಅಧಿಕಾರಿಗಳ ಶಂಕೆಯನ್ನು ಬಲವಾಗಿಸಿದೆ. ಜೊತೆಗೆ ಎಲ್ಲಾ ಕೆರೆಗಳಿಗೂ ಔಷಧಿ ಸಿಂಪಡಿಸಲು ಅಸಾಧ್ಯವಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.</p>.<p>ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿಗಳು ಕೊಕ್ಕರೆಬೆಳ್ಳೂರು ಗ್ರಾಮದ ಕೆರೆಯನ್ನೇ ಅಭಿವೃದ್ದಿ ಪಡಿಸಿ, ಆ ಕೆರೆಯಲ್ಲಿ ಮೀನುಗಳನ್ನು ಬಿಟ್ಟರೆ ಕೊಕ್ಕರೆಗಳು ಆಹಾರ ಹುಡುಕಿ ಕೊಂಡು ಮತ್ಯಾವ ಕೆರೆಗಳಿಗೂ ಹೋಗದೇ ಇಲ್ಲಿಯೇ ಇರುತ್ತವೆ. ಇದರಿಂದ ಕೊಕ್ಕರೆಗಳ ಆರೋಗ್ಯವನ್ನು ಕಾಪಾಡಬಹುದು ಎಂಬುದು ಅಧಿಕಾರಿಗಳ ಯೋಚನೆಯಾಗಿದೆ.</p>.<p>ಈಗಾಗಲೇ ಗ್ರಾಮದ ಕೆರೆ ಅಭಿವೃದ್ದಿ ಮಾಡಲು ₹ 1.30 ಕೋಟಿ ಅಂದಾಜು ವೆಚ್ಚ ತಯಾರಾಗಿದೆ. ಸರ್ಕಾರದ ಮಂಜೂರಾತಿ ಸಿಕ್ಕಿದೆ. ಕಾಮಗಾರಿಯ ಕೆಲಸವೂ ಕೂಡ ಭರದಿಂದ ಸಾಗಿದೆ. ಶಿಂಷಾ ನದಿಯಿಂದ ಬನ್ನಹಳ್ಳಿ ಮಾರ್ಗವಾಗಿ ಏತನೀರಾವರಿ ಮೂಲಕ ಕೆರೆಗೆ ನೀರು ತುಂಬಿಸಲು ಯೋಜಿಸಲಾಗಿದೆ.</p>.<p>ಕೆರೆ ಮಧ್ಯೆ ದ್ವೀಪವನ್ನು ನಿರ್ಮಿಸಿ ಮಾಡಿ, ಅದರಲ್ಲಿ ವಿವಿಧ ಬಗೆಯ ಗಿಡಗಳನ್ನು ಬೆಳೆಸಲು ಯೋಜಿಸಲಾಗಿದೆ. ಕೊಕ್ಕರೆಗಳಿಗೆ ಆಹಾರವಾಗಿ ಕೆರೆಯ ನೀರಿನಲ್ಲಿ ಮೀನುಗಳನ್ನು ಬಿಟ್ಟು ಕೊಕ್ಕರೆಗಳು ಸ್ವಚ್ಛಂದವಾಗಿ ವಿಹರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಇದರ ಕಾಮಗಾರಿಯು ಆರಂಭವಾಗಿದೆ.</p>.<p>‘ಕೆರೆ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದಿರಲು ನಿರ್ಧರಿಸಲಾಗಿದೆ. ಇದಕ್ಕೆ ಗ್ರಾಮಸ್ಥರ ಸಹಕಾರವಿದೆ. ಬರುವ ಜೂನ್, ಜುಲೈ ವೇಳೆಗೆ ಕೆರೆಯ ಅಭಿವೃದ್ದಿ ಕಾಮಗಾರಿಯು ಮುಗಿಯಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಹೇಳಿದರು.</p>.<p>ಕೆರೆ ಅಭಿವೃದ್ಧಿಯ ಬಳಿಕ ವಲಸೆ ಬರುವ ಕೊಕ್ಕರೆಗಳ ಆಹಾರಕ್ಕೆ ಧಕ್ಕೆ ಯಾಗದು. ಈ ಕ್ರಮದಿಂದ ಈ ಭಾಗದಲ್ಲಿ ಅಂತರ್ಜಲವು ಸಂರಕ್ಷಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈಚೆಗೆ ಪೆಲಿಕಾನ್ಗಳು ಸತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<p>ಅಸ್ವಸ್ಥವಾಗಿದ್ದ ಎರಡು ಕೊಕ್ಕರೆಗಳ ಸಾವು</p>.<p>ಕೊಕ್ಕರೆಬೆಳ್ಳೂರಿನಲ್ಲಿ ಅಸ್ವಸ್ಥಗೊಂಡಿದ್ದ 2 ಕೊಕ್ಕರೆಗಳು ಸೋಮವಾರ ಮೃತಪಟ್ಟಿವೆ.</p>.<p>ಒಂದು ತಿಂಗಳಿನಿಂದ ಕೊಕ್ಕರೆಬೆಳ್ಳೂರಿನಲ್ಲಿ ಸತ್ತ ಕೊಕ್ಕರೆಗಳ ಸಂಖ್ಯೆ 20 ಮುಟ್ಟಿದೆ.</p>.<p>ಅರಣ್ಯ ವೀಕ್ಷಕರು ಸತ್ತ ಕೊಕ್ಕರೆಗಳನ್ನು ಪಕ್ಷಿ ಕೇಂದ್ರದ ಬಳಿ ಸುಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತೀನಗರ: </strong>ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆಬೆಳ್ಳೂರುವಿನಲ್ಲಿ ಕೊಕ್ಕರೆಗಳ ಸಾವು ತಡೆಗಟ್ಟುವ ಕ್ರಮವಾಗಿ ₹ 1.30 ಕೋಟಿ ವೆಚ್ಚದಲ್ಲಿ ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ.</p>.<p>ಕೊಕ್ಕರೆಬೆಳ್ಳೂರಿಗೆ ವಲಸೆ ಬರುವ ಕೊಕ್ಕರೆಗಳು ನೀರು, ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಕೆರೆಗಳನ್ನು ಆಶ್ರಯಿಸಿವೆ. ಶಿಂಷಾ ನದಿ, ಸೂಳೆಕೆರೆ ಸೇರಿ ಸುತ್ತಮುತ್ತಲ ಗ್ರಾಮಗಳ ಕೆರೆಗಳು ಕೊಕ್ಕರೆಗಳ ಆಹಾರದ ಮೂಲವಾಗಿದೆ.</p>.<p>ಪ್ರಸ್ತುತ ಈ ಕೆರೆಗಳು ನೀರಿನ ಸೆಲೆ ಕಲುಷಿತ ಗೊಂಡಿದೆ. ಇದು ಕೊಕ್ಕರೆಗಳ ಸಾವಿಗೆ ಕಾರಣವಾಗಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಪ್ರಸ್ತುತ ಮಾದರಹಳ್ಳಿ ಸಮೀಪದ ಸೂಳೆಕೆರೆಯಲ್ಲಿ 3 ಕೊಕ್ಕರೆಗಳು, 2 ನೀರು ಕೋಳಿಗಳು ಸತ್ತಿರುವುದು ಅಧಿಕಾರಿಗಳ ಶಂಕೆಯನ್ನು ಬಲವಾಗಿಸಿದೆ. ಜೊತೆಗೆ ಎಲ್ಲಾ ಕೆರೆಗಳಿಗೂ ಔಷಧಿ ಸಿಂಪಡಿಸಲು ಅಸಾಧ್ಯವಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.</p>.<p>ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿಗಳು ಕೊಕ್ಕರೆಬೆಳ್ಳೂರು ಗ್ರಾಮದ ಕೆರೆಯನ್ನೇ ಅಭಿವೃದ್ದಿ ಪಡಿಸಿ, ಆ ಕೆರೆಯಲ್ಲಿ ಮೀನುಗಳನ್ನು ಬಿಟ್ಟರೆ ಕೊಕ್ಕರೆಗಳು ಆಹಾರ ಹುಡುಕಿ ಕೊಂಡು ಮತ್ಯಾವ ಕೆರೆಗಳಿಗೂ ಹೋಗದೇ ಇಲ್ಲಿಯೇ ಇರುತ್ತವೆ. ಇದರಿಂದ ಕೊಕ್ಕರೆಗಳ ಆರೋಗ್ಯವನ್ನು ಕಾಪಾಡಬಹುದು ಎಂಬುದು ಅಧಿಕಾರಿಗಳ ಯೋಚನೆಯಾಗಿದೆ.</p>.<p>ಈಗಾಗಲೇ ಗ್ರಾಮದ ಕೆರೆ ಅಭಿವೃದ್ದಿ ಮಾಡಲು ₹ 1.30 ಕೋಟಿ ಅಂದಾಜು ವೆಚ್ಚ ತಯಾರಾಗಿದೆ. ಸರ್ಕಾರದ ಮಂಜೂರಾತಿ ಸಿಕ್ಕಿದೆ. ಕಾಮಗಾರಿಯ ಕೆಲಸವೂ ಕೂಡ ಭರದಿಂದ ಸಾಗಿದೆ. ಶಿಂಷಾ ನದಿಯಿಂದ ಬನ್ನಹಳ್ಳಿ ಮಾರ್ಗವಾಗಿ ಏತನೀರಾವರಿ ಮೂಲಕ ಕೆರೆಗೆ ನೀರು ತುಂಬಿಸಲು ಯೋಜಿಸಲಾಗಿದೆ.</p>.<p>ಕೆರೆ ಮಧ್ಯೆ ದ್ವೀಪವನ್ನು ನಿರ್ಮಿಸಿ ಮಾಡಿ, ಅದರಲ್ಲಿ ವಿವಿಧ ಬಗೆಯ ಗಿಡಗಳನ್ನು ಬೆಳೆಸಲು ಯೋಜಿಸಲಾಗಿದೆ. ಕೊಕ್ಕರೆಗಳಿಗೆ ಆಹಾರವಾಗಿ ಕೆರೆಯ ನೀರಿನಲ್ಲಿ ಮೀನುಗಳನ್ನು ಬಿಟ್ಟು ಕೊಕ್ಕರೆಗಳು ಸ್ವಚ್ಛಂದವಾಗಿ ವಿಹರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಇದರ ಕಾಮಗಾರಿಯು ಆರಂಭವಾಗಿದೆ.</p>.<p>‘ಕೆರೆ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದಿರಲು ನಿರ್ಧರಿಸಲಾಗಿದೆ. ಇದಕ್ಕೆ ಗ್ರಾಮಸ್ಥರ ಸಹಕಾರವಿದೆ. ಬರುವ ಜೂನ್, ಜುಲೈ ವೇಳೆಗೆ ಕೆರೆಯ ಅಭಿವೃದ್ದಿ ಕಾಮಗಾರಿಯು ಮುಗಿಯಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಹೇಳಿದರು.</p>.<p>ಕೆರೆ ಅಭಿವೃದ್ಧಿಯ ಬಳಿಕ ವಲಸೆ ಬರುವ ಕೊಕ್ಕರೆಗಳ ಆಹಾರಕ್ಕೆ ಧಕ್ಕೆ ಯಾಗದು. ಈ ಕ್ರಮದಿಂದ ಈ ಭಾಗದಲ್ಲಿ ಅಂತರ್ಜಲವು ಸಂರಕ್ಷಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈಚೆಗೆ ಪೆಲಿಕಾನ್ಗಳು ಸತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<p>ಅಸ್ವಸ್ಥವಾಗಿದ್ದ ಎರಡು ಕೊಕ್ಕರೆಗಳ ಸಾವು</p>.<p>ಕೊಕ್ಕರೆಬೆಳ್ಳೂರಿನಲ್ಲಿ ಅಸ್ವಸ್ಥಗೊಂಡಿದ್ದ 2 ಕೊಕ್ಕರೆಗಳು ಸೋಮವಾರ ಮೃತಪಟ್ಟಿವೆ.</p>.<p>ಒಂದು ತಿಂಗಳಿನಿಂದ ಕೊಕ್ಕರೆಬೆಳ್ಳೂರಿನಲ್ಲಿ ಸತ್ತ ಕೊಕ್ಕರೆಗಳ ಸಂಖ್ಯೆ 20 ಮುಟ್ಟಿದೆ.</p>.<p>ಅರಣ್ಯ ವೀಕ್ಷಕರು ಸತ್ತ ಕೊಕ್ಕರೆಗಳನ್ನು ಪಕ್ಷಿ ಕೇಂದ್ರದ ಬಳಿ ಸುಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>