ಈ ಕುರಿತ ಮಾಹಿತಿ ಒಳಗೊಂಡ ಕೈಪಿಡಿಯೊಂದನ್ನು ಭಾನುವಾರ ಬಿಡುಗಡೆ ಮಾಡಿದ ರಾಮಲಿಂಗಾರೆಡ್ಡಿ, 24 ಹಿಂದೂ(ಸಂಘ ಪರಿವಾರ) ಕೊಲೆ ಪ್ರಕರಣಗಳಲ್ಲಿ 12 ಕಾರ್ಯಕರ್ತರ ಕೊಲೆ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರಿಂದಲೇ ನಡೆದಿದೆ. ಉಳಿದ 12 ಪ್ರಕರಣಗಳಲ್ಲಿ ಹತ್ಯೆಗೆ ಪ್ರಮುಖ ಕಾರಣ ರಾಜಕೀಯ ದ್ವೇಷ, ಜಮೀನು ವ್ಯಾಜ್ಯ, ಇತ್ಯಾದಿ. ಈ ವಿಷಯದ ಬಗ್ಗೆಯೂ ಬಿಜೆಪಿ ಮಾತನಾಡುತ್ತಿಲ್ಲ ಎಂದು ಹೇಳಿದರು.