ಮೊಹರಂ ಕಡೇ ದಿನದಂದು ತಡಗವಾಡಿಯಲ್ಲಿ ಹಿಂದೂಗಳೇ ಸೇರಿ ಭಾವೈಕ್ಯತೆಯ ಬಾಬಯ್ಯ ಹಬ್ಬ ಆಚರಿಸುವ ವಿಶೇಷ ಸಂಪ್ರದಾಯ ತಲೆ ತಲಾಂತರಗಳಿಂದ ನಡೆದು ಬಂದಿದೆ. ಊರಿನ ಜನರು ಫಕೀರರ ವೇಷ ತೊಟ್ಟು, ಕತ್ತಿ ಹಿಡಿದು ಬಾಬಯ್ಯನ ಮೆರವಣಿಗೆ ಮಾಡುತ್ತಾರೆ. ಮೂರು ದಿನಗಳವರೆಗೆ ನಡೆಯುವ ಈ ಆಚರಣೆಯಲ್ಲಿ ಮುಸ್ಲಿಂ ಸಂತರ ತ್ಯಾಗ, ಬಲಿದಾನಗಳನ್ನು ಕೊಂಡಾಡುತ್ತಾರೆ. ಬಾಬಯ್ಯನ ಉತ್ಸವ ಸಾಗುವ ಮಾರ್ಗದಲ್ಲಿ, ಪ್ರತಿ ಮನೆಗಳಿಂದ ಫಕೀರರ ಮೇಲೆ ನೀರು ಸುರಿಯುವ ಪದ್ಧತಿ ಇದೆ. ಆದರೆ, ಈ ಬಾರಿ ಮುಸ್ಲಿಂ ಜನಾಂಗದ ಗುಡ್ಡಪ್ಪ ನಿಧನರಾಗಿರುವ ಹಿನ್ನೆಲೆಯಲ್ಲಿ ಹಬ್ಬ ಸರಳವಾಗಿ ನಡೆಯಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.