ಮಂಡ್ಯ: ಜಿಲ್ಲೆಯ ವಿವಿಧ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೋಗಿಗಳು ಗುರುವಾರ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
ಮಂಡ್ಯ ತಾಲ್ಲೂಕಿನ 65 ವರ್ಷ ವಯಸ್ಸಿನ ವ್ಯಕ್ತಿ, 70 ವರ್ಷ ವಯಸ್ಸಿನ ವೃದ್ಧ ಹಾಗೂ ಮದ್ದೂರು ತಾಲ್ಲೂಕಿನ 75 ವರ್ಷ ವಯಸ್ಸಿನ ಮಹಿಳೆ ಮೃತಪಟ್ಟಿದ್ದಾರೆ. ಕೋವಿಡ್ ಕಾರ್ಯಸೂಚಿ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಗುರುವಾರ ಒಂದೇ ದಿನ 249 ಮಂದಿಯಲ್ಲಿ ಕೋವಿಡ್– 19 ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,509ಕ್ಕೆ ಏರಿಕೆಯಾಗಿದೆ.
ಮಂಡ್ಯ ತಾಲ್ಲೂಕಿನ 92 ಮಂದಿ, ಪಾಂಡವಪುರ 39, ಕೆ.ಆರ್.ಪೇಟೆ 32, ಮದ್ದೂರು 28, ಮಳವಳ್ಳಿ 24, ಶ್ರೀರಂಗಪಟ್ಟಣ 18, ನಾಗಮಂಗಲ ತಾಲ್ಲೂಕಿನ 15 ಮಂದಿಗೆ ಸೋಂಕು ಪತ್ತೆಯಾಗಿದೆ. ಸೋಂಕು ಪತ್ತೆಯಾದ ಸಂಖ್ಯೆಯಷ್ಟೇ (249) ಜನರು ಗುರುವಾರ ಕೋವಿಡ್ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಮಳವಳ್ಳಿ ತಾಲ್ಲೂಕಿನಿಂದ 94, ಮಂಡ್ಯ 91, ಪಾಂಡವಪುರ 28, ಶ್ರೀರಂಗಪಟ್ಟಣ 18, ಮದ್ದೂರು 7, ನಾಗಮಂಗಲ ತಾಲ್ಲೂಕಿನ ಒಬ್ಬರನ್ನು ಬಿಡುಗಡೆ ಮಾಡಲಾಯಿತು. ಒಟ್ಟು ರೋಗಿಗಳಲ್ಲಿ ಇಲ್ಲಿಯವರೆಗೆ 5,444 ಮಂದಿ ಗುಣಮುಖರಾಗಿದ್ದಾರೆ. 1,982 ಪ್ರಕರಣಗಳು ಸಕ್ರಿಯವಾಗಿವೆ.