ಕೋವಿಡ್ನಿಂದ ಗುಣಮುಖರಾದ 412 ಮಂದಿಯನ್ನು ವಿವಿಧ ಕೋವಿಡ್ ಕೇರ್ ಕೇಂದ್ರಗಳಿಂದ ಶನಿವಾರ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 160, ಕೆ.ಆರ್.ಪೇಟೆ 142, ಮಳವಳ್ಳಿ 74, ಶ್ರೀರಂಗಪಟ್ಟಣ 13, ನಾಗಮಂಗಲ ತಾಲ್ಲೂಕಿನ 8 ಮಂದಿಯನ್ನು ಮನೆಗೆ ಕಳುಹಿಸಲಾಯಿತು. ಇಲ್ಲಿಯವರೆಗೆ 7,331 ಮಂದಿ ಗುಣಮುಖರಾಗಿದ್ದು 1574 ಪ್ರಕರಣಗಳು ಸಕ್ರಿಯವಾಗಿವೆ.