ಮಜ್ಜೂರು, ಮಜ್ಜೂರು ತಾಂಡಾ, ತೆಗ್ಗಿನಭಾವನೂರ, ನವೆಭಾವನೂರ, ಕುಸಲಾಪೂರ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸುವ ಈ ಕೆರೆ ಭರ್ತಿಯಾಗಲು,ಮಳೆಯಾದರೆ ಇನ್ನು ಕೆಲವೇ ದಿನಗಳು ಸಾಕು. ‘ಇನ್ನೆರಡು ದೊಡ್ಡ ಮಳೆಗೆ ಕೆರೆ ಭರ್ತಿಯಾಗುವ ಸಂಭವವಿದೆ’ ಎಂದು ಗ್ರಾಮದ ರೈತರಾದ ಶಿವನಗೌಡ ಪಾಟೀಲ ಹಾಗೂ ಕುಮಾರ ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.