<p><strong>ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ):</strong> ತಾಲ್ಲೂಕಿನ ಕೆಆರ್ಎಸ್ ಬೃಂದಾವನಕ್ಕೆ ಪ್ರವಾಸಕ್ಕೆ ಬಂದು ಚಿನ್ನದ ಬ್ರಾಸ್ಲೆಟ್ ಕಳೆದುಕೊಂಡಿದ್ದ ತಮಿಳುನಾಡಿನ ವ್ಯಕ್ತಿಗೆ ಕೈಗಾರಿಕಾ ಭದ್ರತಾ ಪಡೆಯ ಎಎಸ್ಐ ಬ್ರಾಸ್ಲೆಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.</p><p>ತಮಿಳುನಾಡಿನ ಕಾಂಚೀಪುರಂ ನಿವಾಸಿ ವಿಮಲ್ಕುಮಾರ್.ಎಂ ಬುಧವಾರ ಸಂಜೆ ಬೃಂದಾವನ ವೀಕ್ಷಣೆಗೆ ಬಂದಿದ್ದ ವೇಳೆ ತಮ್ಮ ಬ್ರಾಸ್ಲೆಟ್ ಕಳೆದುಕೊಂಡಿದ್ದರು. ಮತ್ತೆ ಗುರುವಾರ ಬೃಂದಾವನಕ್ಕೆ ಬಂದು ಹುಡುಕಾಟ ನಡೆಸಿದ್ದರು. ಕೈಗಾರಿಕಾ ಭದ್ರತಾ ಪಡೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣ. ಡಿ ಅವರಿಗೆ ಅದು ಸಿಕ್ಕಿತ್ತು. </p><p>ಬೃಂದಾವನದ ಸಂಗೀತ ಕಾರಂಜಿ ಸಮೀಪ, ಉತ್ತರ ಬೃಂದಾವನದಲ್ಲಿ ಬಿದ್ದಿದ್ದ ಈ ಬ್ರಾಸ್ಲೆಟ್ ಅನ್ನು ಕೃಷ್ಣ.ಡಿ ಹುಡುಕಿ ಇಟ್ಟು ವಾಪಸ್ ವಿಮಲ್ಕುಮಾರ್ ಅವರಿಗೆ ಕೊಟ್ಟರು.</p><p>‘ಸುಮಾರು ₹1.5 ಲಕ್ಷ ಬೆಲೆಯ, 15 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ಬುಧವಾರ ಸಂಜೆ ಕಳೆದು ಹೋಗಿತ್ತು. ಬೃಂದಾವನದಲ್ಲಿ ಭದ್ರತೆಗೆ ನಿಯೋಜಿಸಿದ್ದ ಎಎಸ್ಐ ಕೃಷ್ಣ ಅವರು ಹುಡುಕಿ ಕೊಟ್ಟಿದ್ದಾರೆ’ ಎಂದು ವಿಮಲ್ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.</p><p>‘ವಿಮಲ್ ಕುಮಾರ್ ಅವರ ಅಧಿಕೃತ ವಿಳಾಸದ ದಾಖಲೆ ಮತ್ತು ಫೋಟೊಗಳನ್ನು ಪಡೆದು ಚಿನ್ನದ ಬ್ರಾಸ್ಲೆಟ್ ಕೊಟ್ಟಿದ್ದೇನೆ’ ಎಂದು ಕೃಷ್ಣ. ಡಿ. ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ):</strong> ತಾಲ್ಲೂಕಿನ ಕೆಆರ್ಎಸ್ ಬೃಂದಾವನಕ್ಕೆ ಪ್ರವಾಸಕ್ಕೆ ಬಂದು ಚಿನ್ನದ ಬ್ರಾಸ್ಲೆಟ್ ಕಳೆದುಕೊಂಡಿದ್ದ ತಮಿಳುನಾಡಿನ ವ್ಯಕ್ತಿಗೆ ಕೈಗಾರಿಕಾ ಭದ್ರತಾ ಪಡೆಯ ಎಎಸ್ಐ ಬ್ರಾಸ್ಲೆಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.</p><p>ತಮಿಳುನಾಡಿನ ಕಾಂಚೀಪುರಂ ನಿವಾಸಿ ವಿಮಲ್ಕುಮಾರ್.ಎಂ ಬುಧವಾರ ಸಂಜೆ ಬೃಂದಾವನ ವೀಕ್ಷಣೆಗೆ ಬಂದಿದ್ದ ವೇಳೆ ತಮ್ಮ ಬ್ರಾಸ್ಲೆಟ್ ಕಳೆದುಕೊಂಡಿದ್ದರು. ಮತ್ತೆ ಗುರುವಾರ ಬೃಂದಾವನಕ್ಕೆ ಬಂದು ಹುಡುಕಾಟ ನಡೆಸಿದ್ದರು. ಕೈಗಾರಿಕಾ ಭದ್ರತಾ ಪಡೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣ. ಡಿ ಅವರಿಗೆ ಅದು ಸಿಕ್ಕಿತ್ತು. </p><p>ಬೃಂದಾವನದ ಸಂಗೀತ ಕಾರಂಜಿ ಸಮೀಪ, ಉತ್ತರ ಬೃಂದಾವನದಲ್ಲಿ ಬಿದ್ದಿದ್ದ ಈ ಬ್ರಾಸ್ಲೆಟ್ ಅನ್ನು ಕೃಷ್ಣ.ಡಿ ಹುಡುಕಿ ಇಟ್ಟು ವಾಪಸ್ ವಿಮಲ್ಕುಮಾರ್ ಅವರಿಗೆ ಕೊಟ್ಟರು.</p><p>‘ಸುಮಾರು ₹1.5 ಲಕ್ಷ ಬೆಲೆಯ, 15 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ಬುಧವಾರ ಸಂಜೆ ಕಳೆದು ಹೋಗಿತ್ತು. ಬೃಂದಾವನದಲ್ಲಿ ಭದ್ರತೆಗೆ ನಿಯೋಜಿಸಿದ್ದ ಎಎಸ್ಐ ಕೃಷ್ಣ ಅವರು ಹುಡುಕಿ ಕೊಟ್ಟಿದ್ದಾರೆ’ ಎಂದು ವಿಮಲ್ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.</p><p>‘ವಿಮಲ್ ಕುಮಾರ್ ಅವರ ಅಧಿಕೃತ ವಿಳಾಸದ ದಾಖಲೆ ಮತ್ತು ಫೋಟೊಗಳನ್ನು ಪಡೆದು ಚಿನ್ನದ ಬ್ರಾಸ್ಲೆಟ್ ಕೊಟ್ಟಿದ್ದೇನೆ’ ಎಂದು ಕೃಷ್ಣ. ಡಿ. ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>