ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲೂ ನಾನೇ ಶಾಸಕ: ನಾರಾಯಣಗೌಡ

Last Updated 27 ಸೆಪ್ಟೆಂಬರ್ 2019, 9:24 IST
ಅಕ್ಷರ ಗಾತ್ರ

ಕೆ.ಆರ್‌.ಪೇಟೆ: ‘ಸುಪ್ರೀಂಕೋರ್ಟ್ ಉಪ ಚುನಾವಣೆಯನ್ನು ಮುಂದೂಡಿ ರುವುದು ಸಂತಸ ತಂದಿದೆ. ಇದು ನಮ್ಮ ಗೆಲುವು’ ಎಂದು ಅನರ್ಹ ಶಾಸಕ ನಾರಾಯಣಗೌಡ ಹೇಳಿದರು.

ತಮ್ಮ ನಿವಾಸದಲ್ಲಿ ಸಂಭ್ರಮಾಚರಣೆ ಮಾಡಿದ ಅವರು, ‘ನಾವು ತಪ್ಪು ಮಾಡಿಲ್ಲ. ನಮ್ಮ ಸ್ವಾತಂತ್ರ್ಯವನ್ನು ಹರಣ ಮಾಡಿ ಗುಲಾಮರನ್ನಾಗಿಸಿದ್ದ ಪಕ್ಷ ನಮಗೆ ಬೇಕಿರಲಿಲ್ಲ. ಹಾಗಾಗಿ ಹೊರಬಂದು ರಾಜೀನಾಮೆ ನೀಡಿದ್ದೆವು. ಸ್ಪೀಕರ್ ನಿಸ್ಪಕ್ಷಪಾತವಾಗಿ ನಡೆದುಕೊಳ್ಳದೆ ನಮ್ಮನ್ನು ದುರುದ್ದೇಶದಿಂದ ಅನರ್ಹ ಗೊಳಿಸಿದ್ದಾರೆ. ಸ್ಪೀಕರ್ ಒತ್ತಡಕ್ಕೆ ಒಳಗಾಗಿ ತಪ್ಪು ನಿರ್ಧಾರ ಮಾಡಿದ್ದಾರೆ. ನಾವು ಇವತ್ತಿಗೂ ಶಾಸಕರೇ ಆಗಿದ್ದೇವೆ. ನಾವು ರಾಜೀನಾಮೆ ನೀಡಿರುವುದು ನಮಗಾದ ತೊಂದರೆಯಿಂದ ಮಾತ್ರ’ ಎಂದು ತಿಳಿಸಿದರು.

‘ನಮ್ಮ ವಾದವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ, ಚುನಾವಣೆ ಯನ್ನು ಮುಂದೂಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT