ತಮ್ಮ ನಿವಾಸದಲ್ಲಿ ಸಂಭ್ರಮಾಚರಣೆ ಮಾಡಿದ ಅವರು, ‘ನಾವು ತಪ್ಪು ಮಾಡಿಲ್ಲ. ನಮ್ಮ ಸ್ವಾತಂತ್ರ್ಯವನ್ನು ಹರಣ ಮಾಡಿ ಗುಲಾಮರನ್ನಾಗಿಸಿದ್ದ ಪಕ್ಷ ನಮಗೆ ಬೇಕಿರಲಿಲ್ಲ. ಹಾಗಾಗಿ ಹೊರಬಂದು ರಾಜೀನಾಮೆ ನೀಡಿದ್ದೆವು. ಸ್ಪೀಕರ್ ನಿಸ್ಪಕ್ಷಪಾತವಾಗಿ ನಡೆದುಕೊಳ್ಳದೆ ನಮ್ಮನ್ನು ದುರುದ್ದೇಶದಿಂದ ಅನರ್ಹ ಗೊಳಿಸಿದ್ದಾರೆ. ಸ್ಪೀಕರ್ ಒತ್ತಡಕ್ಕೆ ಒಳಗಾಗಿ ತಪ್ಪು ನಿರ್ಧಾರ ಮಾಡಿದ್ದಾರೆ. ನಾವು ಇವತ್ತಿಗೂ ಶಾಸಕರೇ ಆಗಿದ್ದೇವೆ. ನಾವು ರಾಜೀನಾಮೆ ನೀಡಿರುವುದು ನಮಗಾದ ತೊಂದರೆಯಿಂದ ಮಾತ್ರ’ ಎಂದು ತಿಳಿಸಿದರು.