ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ಬಂದಿದೆ ಎಂಬ ಮಾಹಿತಿ ಆಧಾರದ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಮೂರು ವಾಹನಗಳಲ್ಲಿದ್ದ ಅಕ್ಕಿ, ರಾಗಿಯನ್ನು ರೈಸ್ಮಿಲ್ಗೆ ಇಳಿಸಲಾಗುತ್ತಿತ್ತು. ಇದಕ್ಕೂ ಮೊದಲು ಇನ್ನೊಂದು ವಾಹನ ಅಕ್ಕಿ ಇಳಿಸಿ ಬೆಂಗಳೂರಿನತ್ತ ಹೊರಟಿತ್ತು. ವಾಹನದ ಬೆನ್ನು ಹತ್ತಿದ ಪೊಲೀಸರು ಮದ್ದೂರು ಬಳಿ ವಶಕ್ಕೆ ಪಡೆದಿದ್ದಾರೆ.
ಮೂರು ವಾಹನಗಳಲ್ಲಿ 1 ವಾಹನ ಆಹಾರ ಇಲಾಖೆಯ ವಾಹನವಾಗಿದ್ದು ಬೆಂಗಳೂರು ಬನಶಂಕರಿ ಟಿಎಪಿಸಿಎಂಎಸ್ಗೆ ಅನ್ನಭಾಗ್ಯ ಅಕ್ಕಿ ಕೊಂಡೊಯ್ಯಬೇಕಾಗಿತ್ತು. ಆದರೆ, ಅಕ್ಕಿಯ ಸ್ವಚ್ಛತೆ ಕೊರತೆ, ತೂಕದಲ್ಲಿ ವ್ಯತ್ಯಾಸ ಇದ್ದ ಕಾರಣ ತಿರಸ್ಕೃತಗೊಂಡಿತ್ತು. ಆ ಅಕ್ಕಿಯನ್ನು ರೈಸ್ ಮಿಲ್ನಲ್ಲಿ ಇಳಿಸಲಾಗುತ್ತಿತ್ತು.