ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ನಾಲಾ ಭಾಗದ ರೈತರಲ್ಲಿ ಆತಂಕ ಮೂಡಿದೆ. 15 ದಿನಗಳೊಮ್ಮೆ ಕಟ್ಟು ಪದ್ಧತಿಯನ್ನು ನೀರು ಕೊಟ್ಟರೂ ಜಲಾಶಯದ ಕೊನೆಯ ಭಾಗವಾಗಿರುವ ತಾಲ್ಲೂಕಿನ ನಾಲೆಗಳಿಗೆ ಸಮರ್ಪಕವಾಗಿ ನೀರು ಬರುವುದಿಲ್ಲ, ಇದ್ದರಿಂದಾಗಿ ರೈತರು ಕೊಳವೆ ಬಾವಿ ಹಾಗೂ ಮಳೆಯನ್ನೇ ಅವಲಂಬಿಸುವಂತಾಗಿದೆ.