‘ಶಾಲೆ ತೆರದಿಲ್ಲ, ಈಗ ಏನು ಮಾಡುತ್ತಿದ್ದೀರಿ’ ಎಂದು ಮಕ್ಕಳನ್ನು ಪ್ರಶ್ನಿಸಿದರು. ಅದಕ್ಕೆ ಮಕ್ಕಳು ‘ಸರ್ ಕೊರೊನಾ ಇದೆಯಲ್ಲ, ಏನ್ ಮಾಡುವುದಕ್ಕೂ ಭಯವಾಗುತ್ತಿದೆ’ ಎಂದರು. ಆಗ ಸಚಿವರು ‘ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಇರಬೇಕು. ಇನ್ನೂ ಸ್ವಲ್ಪ ದಿನ ಶಾಲೆಗಳು ಪ್ರಾರಂಭವಾಗುತ್ತವೆ. ಭಯಪಡಬೇಡಿ’ ಎಂದು ವಿಶ್ವಾಸ ಮೂಡಿಸಿದರು.