ಆಳರಸರ ಕಾಲದಲ್ಲಿ ಶ್ರೀಗಂಧದ ಕೋಠಿಯಾಗಿದ್ದ ಸ್ಥಳ ಸೆಂದಿಲ್ ಕೋಟೆ ಎಂದು ಹೆಸರಾಗಿದ್ದು, ಸದ್ಯ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ. ಕೋಟೆಯ ಮೇಲೆ ಗಿಡ ಗಂಟಿಗಳು ಬೆಳೆದು ಕಲ್ಲಿನ ಕೋಟೆಯನ್ನು ಶಿಥಿಲಗೊಳಿಸಿವೆ. ಧಾರಾಕಾರ ಮಳೆಗೆ ಕೋಟೆ ಮೂರು ಕಡೆ ಕುಸಿತ ಕಂಡಿದ್ದು, ಉಳಿದ ಭಾಗವೂ ಕುಸಿಯುವ ಅಪಾಯ ಎದುರಾಗಿದೆ.