<p><strong>ಮಂಡ್ಯ</strong>: ನಗರದ ಸ್ಮಶಾನವೊಂದರಲ್ಲಿ ಕೆಲ ದಿನಗಳ ಹಿಂದೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಸುಭಾಷ್ ಎಸ್. ಅಲಿಯಾಸ್ ಸುಬ್ಬಿ (18) ಎಂಬಾತನ ಬಲಗಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ಬುಧವಾರ ತಾಲ್ಲೂಕಿನ ಬಿ.ಹೊಸೂರು ಬಳಿ ನಡೆದಿದೆ. </p><p>ಆರೋಪಿ ಸುಭಾಷ್ ಮಂಡ್ಯ ನಗರದ ಸಾದತ್ ನಗರದ ನಿವಾಸಿಯಾಗಿದ್ದು, ಈತನ ವಿರುದ್ಧ ಮಂಡ್ಯ ಪೂರ್ವ, ಮಂಡ್ಯ ಪಶ್ಚಿಮ, ಮಂಡ್ಯ ಸೆಂಟ್ರಲ್ ಹಾಗೂ ಹಲಗೂರು ಪೊಲೀಸ್ ಠಾಣೆಗಳಲ್ಲಿ ಬೆದರಿಕೆ, ಹಲ್ಲೆ ಮತ್ತು ಕೊಲೆ ಯತ್ನ ಸೇರಿದಂತೆ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು.</p><p>ಟಿ.ನರಸೀಪುರದ ಯಶವಂತ ಎಂಬ ಯುವಕನನ್ನು ಬೈಕಿನಲ್ಲಿ ಸ್ಮಶಾನವೊಂದಕ್ಕೆ ಕರೆದೊಯ್ದು, ಸುಭಾಷ್ ಮತ್ತು ಆತನ ಗ್ಯಾಂಗ್ ಮಚ್ಚಿನಿಂದ ಹಲ್ಲೆ ನಡೆಸುವುದನ್ನು ಲೈವ್ ವಿಡಿಯೊ ಮಾಡಿದ್ದರು. ಆರೋಪಿಗಳ ಬಂಧನಕ್ಕೆ ಮಂಡ್ಯ ಪೂರ್ವ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಷಾದ್ರಿ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. </p><p>‘ಖಚಿತ ಮಾಹಿತಿ ಮೇರೆಗೆ ಬುಧವಾರ ಬೆಳಿಗ್ಗೆ 6.30ರ ಸಮಯದಲ್ಲಿ ಆರೋಪಿ ಸುಭಾಷ್ನನ್ನು ಬಂಧಿಸಲು ಪೊಲೀಸರು ಹೋದಾಗ, ಆರೋಪಿ ಕಲ್ಲಿನಿಂದ ಹಲ್ಲೆಗೆ ಮುಂದಾದ. ಶರಣಾಗತನಾಗಲು ಹೇಳಿದರೂ ಒಪ್ಪದೆ ತೀವ್ರ ಪ್ರತಿರೋಧ ಒಡ್ಡಿದ. ಈ ಸಮಯದಲ್ಲಿ ಆತ್ಮರಕ್ಷಣೆಗಾಗಿ ಸಬ್ಇನ್ಸ್ಪೆಕ್ಟರ್ ಶೇಷಾದ್ರಿ ಅವರು ಪಿಸ್ತೂಲಿನಿಂದ ಸುಭಾಷ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ನಂತರ ಆತನನ್ನು ಮಂಡ್ಯ ‘ಮಿಮ್ಸ್’ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ. </p><p><strong>ದರೋಡೆಗೆ ಯತ್ನ: 7 ಆರೋಪಿಗಳ ಬಂಧನ</strong></p><p>ಮಂಡ್ಯ ನಗರದ ಕಲ್ಲಹಳ್ಳಿಯ ಹಳೆಯ ಎಂ.ಪಿ.ರಸ್ತೆಯಲ್ಲಿ ಕಾರು ಮತ್ತು ಸ್ಕೂಟರ್ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪು ಫೆ.25ರಂದು ಸಂಜೆ 7.30ರ ವೇಳೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಂದ ದರೋಡೆ, ಸುಲಿಗೆ ಮಾಡಿ ನಗನಾಣ್ಯ ದೋಚಲು ಯತ್ನಿಸುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. </p><p>ಅಜಯ್ ಅಲಿಯಾಸ್ ಬೆಣ್ಣೆ, ಮೊಹಮ್ಮದ್ ಸಮೀರ್, ಶಿವಾನಂದ (ಗೊಳ್ಳೆ ಶಿವ), ಹೇಮಂತಕುಮಾರ್ ಎ.ಆರ್., ಉಲ್ಲಾಸ್ಗೌಡ (ಚಿಟ್ಟೆ), ಸ್ವರೂಪ ಎಂ.ಎಸ್., ಪುನೀತ್ ಕೆ.ಎನ್. ಬಂಧಿತ ಆರೋಪಿಗಳು. </p><p>ಸಾರ್ವಜನಿಕರಿಂದ ಹಣ ದೋಚಲು ಹೊಂಚು ಹಾಕುತ್ತಿರುವ ಬಗ್ಗೆ ದೂರು ಬಂದ ತಕ್ಷಣ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಸುಪೇಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. </p><p><strong>ಬಾರ್ನಲ್ಲಿ ಹಲ್ಲೆ: 8 ಆರೋಪಿಗಳ ಬಂಧನ</strong></p><p>ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಗೇಟ್ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಪಕ್ಕದ ಟೇಬಲ್ನವರ ಜೊತೆ ಜಗಳವಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p><p>ಮದ್ದೂರು ತಾಲ್ಲೂಕಿನ ಬೊಪ್ಪಸಮುದ್ರದ ವೆಂಕಟೇಶ ಎಚ್.ಎಸ್, ಹುನುಗನಹಳ್ಳಿ ಗ್ರಾಮದ ಹರ್ಷ ಎಚ್.ಎಸ್., ಮಂಡ್ಯ ನಗರದ ಸುಭಾಷ್ ಅಲಿಯಾಸ್ ಸುಬ್ಬಿ, ಮಠದ ಹೊನ್ನಾಯಕನಹಳ್ಳಿಯ ಶಿವಕುಮಾರ್, ಸಾಗರ್, ಸುಹಾಸ್ ಬಂಧಿತ ಆರೋಪಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ನಗರದ ಸ್ಮಶಾನವೊಂದರಲ್ಲಿ ಕೆಲ ದಿನಗಳ ಹಿಂದೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಸುಭಾಷ್ ಎಸ್. ಅಲಿಯಾಸ್ ಸುಬ್ಬಿ (18) ಎಂಬಾತನ ಬಲಗಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ಬುಧವಾರ ತಾಲ್ಲೂಕಿನ ಬಿ.ಹೊಸೂರು ಬಳಿ ನಡೆದಿದೆ. </p><p>ಆರೋಪಿ ಸುಭಾಷ್ ಮಂಡ್ಯ ನಗರದ ಸಾದತ್ ನಗರದ ನಿವಾಸಿಯಾಗಿದ್ದು, ಈತನ ವಿರುದ್ಧ ಮಂಡ್ಯ ಪೂರ್ವ, ಮಂಡ್ಯ ಪಶ್ಚಿಮ, ಮಂಡ್ಯ ಸೆಂಟ್ರಲ್ ಹಾಗೂ ಹಲಗೂರು ಪೊಲೀಸ್ ಠಾಣೆಗಳಲ್ಲಿ ಬೆದರಿಕೆ, ಹಲ್ಲೆ ಮತ್ತು ಕೊಲೆ ಯತ್ನ ಸೇರಿದಂತೆ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು.</p><p>ಟಿ.ನರಸೀಪುರದ ಯಶವಂತ ಎಂಬ ಯುವಕನನ್ನು ಬೈಕಿನಲ್ಲಿ ಸ್ಮಶಾನವೊಂದಕ್ಕೆ ಕರೆದೊಯ್ದು, ಸುಭಾಷ್ ಮತ್ತು ಆತನ ಗ್ಯಾಂಗ್ ಮಚ್ಚಿನಿಂದ ಹಲ್ಲೆ ನಡೆಸುವುದನ್ನು ಲೈವ್ ವಿಡಿಯೊ ಮಾಡಿದ್ದರು. ಆರೋಪಿಗಳ ಬಂಧನಕ್ಕೆ ಮಂಡ್ಯ ಪೂರ್ವ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಷಾದ್ರಿ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. </p><p>‘ಖಚಿತ ಮಾಹಿತಿ ಮೇರೆಗೆ ಬುಧವಾರ ಬೆಳಿಗ್ಗೆ 6.30ರ ಸಮಯದಲ್ಲಿ ಆರೋಪಿ ಸುಭಾಷ್ನನ್ನು ಬಂಧಿಸಲು ಪೊಲೀಸರು ಹೋದಾಗ, ಆರೋಪಿ ಕಲ್ಲಿನಿಂದ ಹಲ್ಲೆಗೆ ಮುಂದಾದ. ಶರಣಾಗತನಾಗಲು ಹೇಳಿದರೂ ಒಪ್ಪದೆ ತೀವ್ರ ಪ್ರತಿರೋಧ ಒಡ್ಡಿದ. ಈ ಸಮಯದಲ್ಲಿ ಆತ್ಮರಕ್ಷಣೆಗಾಗಿ ಸಬ್ಇನ್ಸ್ಪೆಕ್ಟರ್ ಶೇಷಾದ್ರಿ ಅವರು ಪಿಸ್ತೂಲಿನಿಂದ ಸುಭಾಷ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ನಂತರ ಆತನನ್ನು ಮಂಡ್ಯ ‘ಮಿಮ್ಸ್’ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ. </p><p><strong>ದರೋಡೆಗೆ ಯತ್ನ: 7 ಆರೋಪಿಗಳ ಬಂಧನ</strong></p><p>ಮಂಡ್ಯ ನಗರದ ಕಲ್ಲಹಳ್ಳಿಯ ಹಳೆಯ ಎಂ.ಪಿ.ರಸ್ತೆಯಲ್ಲಿ ಕಾರು ಮತ್ತು ಸ್ಕೂಟರ್ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪು ಫೆ.25ರಂದು ಸಂಜೆ 7.30ರ ವೇಳೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಂದ ದರೋಡೆ, ಸುಲಿಗೆ ಮಾಡಿ ನಗನಾಣ್ಯ ದೋಚಲು ಯತ್ನಿಸುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. </p><p>ಅಜಯ್ ಅಲಿಯಾಸ್ ಬೆಣ್ಣೆ, ಮೊಹಮ್ಮದ್ ಸಮೀರ್, ಶಿವಾನಂದ (ಗೊಳ್ಳೆ ಶಿವ), ಹೇಮಂತಕುಮಾರ್ ಎ.ಆರ್., ಉಲ್ಲಾಸ್ಗೌಡ (ಚಿಟ್ಟೆ), ಸ್ವರೂಪ ಎಂ.ಎಸ್., ಪುನೀತ್ ಕೆ.ಎನ್. ಬಂಧಿತ ಆರೋಪಿಗಳು. </p><p>ಸಾರ್ವಜನಿಕರಿಂದ ಹಣ ದೋಚಲು ಹೊಂಚು ಹಾಕುತ್ತಿರುವ ಬಗ್ಗೆ ದೂರು ಬಂದ ತಕ್ಷಣ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಸುಪೇಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. </p><p><strong>ಬಾರ್ನಲ್ಲಿ ಹಲ್ಲೆ: 8 ಆರೋಪಿಗಳ ಬಂಧನ</strong></p><p>ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಗೇಟ್ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಪಕ್ಕದ ಟೇಬಲ್ನವರ ಜೊತೆ ಜಗಳವಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p><p>ಮದ್ದೂರು ತಾಲ್ಲೂಕಿನ ಬೊಪ್ಪಸಮುದ್ರದ ವೆಂಕಟೇಶ ಎಚ್.ಎಸ್, ಹುನುಗನಹಳ್ಳಿ ಗ್ರಾಮದ ಹರ್ಷ ಎಚ್.ಎಸ್., ಮಂಡ್ಯ ನಗರದ ಸುಭಾಷ್ ಅಲಿಯಾಸ್ ಸುಬ್ಬಿ, ಮಠದ ಹೊನ್ನಾಯಕನಹಳ್ಳಿಯ ಶಿವಕುಮಾರ್, ಸಾಗರ್, ಸುಹಾಸ್ ಬಂಧಿತ ಆರೋಪಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>