<p>ನಾಗಮಂಗಲ: ಟ್ಯಾಂಕ್ ನಿರ್ಮಿಸಿ ಎರಡು ವರ್ಷ ಕಳೆದಿದೆ. ಆದರೆ, ಅದಕ್ಕೆ ಒಮ್ಮೆಯೂ ನೀರು ಪೂರೈಸಿಲ್ಲ. ನೀರು ಪೂರೈಸದಿದ್ದರೆ, ಟ್ಯಾಂಕ್ ನಿರ್ಮಿಸಿದ್ದೇಕೆ ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.<br /> <br /> ತಾಲ್ಲೂಕಿನ ಹೊಣಕೆರೆ ಹೋಬಳಿಯ ಬಿ. ಶೆಟ್ಟಿಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ 2 ವರ್ಷಗಳ ಹಿಂದೆ ₨ 15 ಲಕ್ಷ ವೆಚ್ಚದಲ್ಲಿ ಮೇಜರ್ ಟ್ಯಾಂಕ್ ನಿರ್ಮಾಣಗೊಂಡಿದೆ.<br /> <br /> ಟ್ಯಾಂಕ್ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಒಂದು ಹನಿ ನೀರು ತುಂಬಿಸಿಲ್ಲ. ಟ್ಯಾಂಕ್ ಕಟ್ಟಿಸಿದ ಅಧಿಕಾರಿಗಳು ಟ್ಯಾಂಕಿನಿಂದ ಗ್ರಾಮಕ್ಕೆ ನೀರು ಪೂರೈಸುವ ಪೈಪ್ಲೈಲ್ ಕಾಮಗಾರಿ ಮಾಡಲಿಲ್ಲ. ಹಾಗಾಗಿ ಟ್ಯಾಂಕ್ ನಿರರ್ಥಕವಾಗಿದೆ.<br /> <br /> ನಿರ್ಮಿತಿ ಕೇಂದ್ರ ಕಾಮಗಾರಿ ನಿರ್ವಹಿಸಿದೆ. ನೀರು ಸಂಗ್ರಹಿಸಿದ್ದರಿಂದ ಅಲ್ಲಲ್ಲಿ ಹಾಳಾದಂತೆ ಕಂಡು ಬರುತ್ತಿದೆ. ಟ್ಯಾಂಕ್ಗೆ ಅರ್ಧ ಕಿ.ಮೀ. ದೂರದಲ್ಲಿ ಕೊಳವೆಬಾವಿ ಕೊರೆಯಿಸಲಾಗಿದೆ. ಅದನ್ನೂ ಉಪಯೋಗಿಸದಿರುವುದರಿಂದ ನಿಷ್ಪಯೋಜಕವಾಗಿದೆ. ಮಣ್ಣು ಬಿದ್ದು ಕೊಳವೆಬಾವಿ ಹಾಳಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.<br /> <br /> ಪ್ರಸ್ತುತ ಗ್ರಾಮಕ್ಕೆ ತೊಂಬೆಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆ ನೀರು ಕುಡಿಯಲು ಯೋಗ್ಯವಲ್ಲದ್ದರಿಂದ ಟ್ಯಾಂಕ್ ಕಟ್ಟಿಸಿ, ಕೊಳವೆಬಾವಿ ಮೂಲಕ ನೀರು ಪೂರೈಸಲು ಯೋಜಿಸ ಲಾಗಿತ್ತು. ತೊಂಬೆಗಳ ಶುಚಿತ್ವ ಕಾಪಾಡದ್ದರಿಂದ ಕೆಲವೊಮ್ಮೆ ಕಲ್ಮಷ ನೀರೂ ಪೂರೈಕೆಯಾಗುತ್ತದೆ ಎಂದು ದೂರುತ್ತಾರೆ ಗ್ರಾಮಸ್ಥರು. ಕೆಲವರು ನಾಗಮಂಗಲದಿಂದ ಹಣ ತೆತ್ತು ಫಿಲ್ಟರ್ ಮಾಡಿದ ನೀರನ್ನು ತರಿಸಿಕೊಳ್ಳುತ್ತಿದ್ದಾರೆ.<br /> <br /> ಸಧ್ಯಕ್ಕೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಟ್ಯಾಂಕ್ ನಿರ್ಮಿಸಿದ ನಿರ್ಮಿತಿ ಕೇಂದ್ರದವರು ಮಾಹಿತಿ ನೀಡದ ಹೊರತು ನಾವು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹಣದ ಕೊರತೆಯಿಂದ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸ ಲಾಗುವುದು ಎನ್ನುತ್ತಾರೆ ಬ್ರಹ್ಮದೇವರ ಹಳ್ಳಿ ಪಂಚಾಯಿತಿ ಪಿಡಿಒ ಶ್ರೀಕಂಠ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಗಮಂಗಲ: ಟ್ಯಾಂಕ್ ನಿರ್ಮಿಸಿ ಎರಡು ವರ್ಷ ಕಳೆದಿದೆ. ಆದರೆ, ಅದಕ್ಕೆ ಒಮ್ಮೆಯೂ ನೀರು ಪೂರೈಸಿಲ್ಲ. ನೀರು ಪೂರೈಸದಿದ್ದರೆ, ಟ್ಯಾಂಕ್ ನಿರ್ಮಿಸಿದ್ದೇಕೆ ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.<br /> <br /> ತಾಲ್ಲೂಕಿನ ಹೊಣಕೆರೆ ಹೋಬಳಿಯ ಬಿ. ಶೆಟ್ಟಿಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ 2 ವರ್ಷಗಳ ಹಿಂದೆ ₨ 15 ಲಕ್ಷ ವೆಚ್ಚದಲ್ಲಿ ಮೇಜರ್ ಟ್ಯಾಂಕ್ ನಿರ್ಮಾಣಗೊಂಡಿದೆ.<br /> <br /> ಟ್ಯಾಂಕ್ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಒಂದು ಹನಿ ನೀರು ತುಂಬಿಸಿಲ್ಲ. ಟ್ಯಾಂಕ್ ಕಟ್ಟಿಸಿದ ಅಧಿಕಾರಿಗಳು ಟ್ಯಾಂಕಿನಿಂದ ಗ್ರಾಮಕ್ಕೆ ನೀರು ಪೂರೈಸುವ ಪೈಪ್ಲೈಲ್ ಕಾಮಗಾರಿ ಮಾಡಲಿಲ್ಲ. ಹಾಗಾಗಿ ಟ್ಯಾಂಕ್ ನಿರರ್ಥಕವಾಗಿದೆ.<br /> <br /> ನಿರ್ಮಿತಿ ಕೇಂದ್ರ ಕಾಮಗಾರಿ ನಿರ್ವಹಿಸಿದೆ. ನೀರು ಸಂಗ್ರಹಿಸಿದ್ದರಿಂದ ಅಲ್ಲಲ್ಲಿ ಹಾಳಾದಂತೆ ಕಂಡು ಬರುತ್ತಿದೆ. ಟ್ಯಾಂಕ್ಗೆ ಅರ್ಧ ಕಿ.ಮೀ. ದೂರದಲ್ಲಿ ಕೊಳವೆಬಾವಿ ಕೊರೆಯಿಸಲಾಗಿದೆ. ಅದನ್ನೂ ಉಪಯೋಗಿಸದಿರುವುದರಿಂದ ನಿಷ್ಪಯೋಜಕವಾಗಿದೆ. ಮಣ್ಣು ಬಿದ್ದು ಕೊಳವೆಬಾವಿ ಹಾಳಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.<br /> <br /> ಪ್ರಸ್ತುತ ಗ್ರಾಮಕ್ಕೆ ತೊಂಬೆಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆ ನೀರು ಕುಡಿಯಲು ಯೋಗ್ಯವಲ್ಲದ್ದರಿಂದ ಟ್ಯಾಂಕ್ ಕಟ್ಟಿಸಿ, ಕೊಳವೆಬಾವಿ ಮೂಲಕ ನೀರು ಪೂರೈಸಲು ಯೋಜಿಸ ಲಾಗಿತ್ತು. ತೊಂಬೆಗಳ ಶುಚಿತ್ವ ಕಾಪಾಡದ್ದರಿಂದ ಕೆಲವೊಮ್ಮೆ ಕಲ್ಮಷ ನೀರೂ ಪೂರೈಕೆಯಾಗುತ್ತದೆ ಎಂದು ದೂರುತ್ತಾರೆ ಗ್ರಾಮಸ್ಥರು. ಕೆಲವರು ನಾಗಮಂಗಲದಿಂದ ಹಣ ತೆತ್ತು ಫಿಲ್ಟರ್ ಮಾಡಿದ ನೀರನ್ನು ತರಿಸಿಕೊಳ್ಳುತ್ತಿದ್ದಾರೆ.<br /> <br /> ಸಧ್ಯಕ್ಕೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಟ್ಯಾಂಕ್ ನಿರ್ಮಿಸಿದ ನಿರ್ಮಿತಿ ಕೇಂದ್ರದವರು ಮಾಹಿತಿ ನೀಡದ ಹೊರತು ನಾವು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹಣದ ಕೊರತೆಯಿಂದ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸ ಲಾಗುವುದು ಎನ್ನುತ್ತಾರೆ ಬ್ರಹ್ಮದೇವರ ಹಳ್ಳಿ ಪಂಚಾಯಿತಿ ಪಿಡಿಒ ಶ್ರೀಕಂಠ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>