<p><strong>ನಾಗಮಂಗಲ: </strong>ಹೂಳು ತೆಗೆಯದ ಚರಂಡಿಗಳು, ನಿರ್ವಹಣೆ ಇಲ್ಲದ ಬೀದಿ ದೀಪಗಳು, ಡಾಂಬರು ಕಾಣದ ರಸ್ತೆ ಸೇರಿದಂತೆ ಹಲವು ಸಮಸ್ಯೆಗಳು ತಾಲ್ಲೂಕಿನ ಮಾಯಣ್ಣಗೌಡನ ಕೊಪ್ಪಲು ಪ್ರವೇಶಿಸುತ್ತಿದ್ದಂತೆಯೇ ಕಾಣುತ್ತವೆ.<br /> <br /> ತಾಲ್ಲೂಕಿನ ಕಸಬಾ ಹೋಬಳಿಯ ಪಾಲಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಣ್ಣಗೌಡನಕೊಪ್ಪಲು 75ಕ್ಕೂ ಅಧಿಕ ಮನೆಗಳಿದ್ದು, 500ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಮೂಲ ಸೌಕರ್ಯಗಳ ಕೊರತೆಯು ಈ ಚಿಕ್ಕ ಗ್ರಾಮವನ್ನು ಕಾಡುತ್ತಿದೆ.<br /> <br /> ಗ್ರಾಮವು ನಾಗಮಂಗಲ ಪಟ್ಟಣದ ಕೂಗಳತೆಯ ದೂರದಲ್ಲಿದೆ. ಬೆಂಗಳೂರು - ಜಲಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದರೂ, ಗ್ರಾಮದಲ್ಲಿ ಉತ್ತಮ ರಸ್ತೆಗಳಿಲ್ಲ. ಕೆಲವೆಡೆ ಚರಂಡಿಗಳಿದ್ದರೂ, ಹೂಳು ತೆಗೆಯಿಸಿಲ್ಲ. ಬೀದಿ ದೀಪಗಳಿದ್ದರೂ ಹೊತ್ತಿಕೊಳ್ಳದ್ದರಿಂದ ಕತ್ತಲಿನಲ್ಲಿಯೇ ತಿರುಗಾಡಬೇಕಾದ ಸ್ಥಿತಿ ಗ್ರಾಮಸ್ಥರದ್ದಾಗಿದೆ.<br /> <br /> <strong>ಹದಗೆಟ್ಟಿರುವ ರಸ್ತೆಗಳು: </strong>ಗ್ರಾಮದ ಬಹುತೇಕ ರಸ್ತೆಗಳು ಸರಿಯಾಗಿಲ್ಲ. ಮಳೆ ಬಂದರೆ ರಸ್ತೆಗಳು ಕೆಸರಿನ ಹೊಂಡಗಳಂತೆ ಮಾರ್ಪಾಟಾಗುತ್ತವೆ. ಚಿಕ್ಕ–ಪುಟ್ಟ ರಸ್ತೆಗಳೂ ಹಾಳಾಗಿವೆ. ವಾಹನಗಳು ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ಇದೆ.<br /> <br /> <strong>ತುಂಬಿ ತುಳುಕುತ್ತಿರುವ ಅನೈರ್ಮಲ್ಯ: </strong>ಗ್ರಾಮದ ಸುತ್ತ–ಮುತ್ತಲು ಬರೀ ಕಸವೋ ಕಸ. ನೀರಿನ ಟ್ಯಾಂಕ್ ಸಮೀಪ ಅಳವಡಿಸಿರುವ ನಲ್ಲಿಗಳಿಂದ ಬರುವ ನೀರು ಹೊರ ಹೋಗಲು ಚರಂಡಿ ವ್ಯವಸ್ಥೆಯಿಲ್ಲ.<br /> <br /> ಗ್ರಾಮದ ಕೆಲವು ಕಡೆಗಳಲ್ಲಿ ಚರಂಡಿಯನ್ನು ಹಳೆಯ ಕಾಲದಲ್ಲಿ ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದ್ದರಿಂದ ಹೂಳು ತುಂಬಿಕೊಂಡಿವೆ. ನೀರು ಹರಿಯದೆ ಅಲ್ಲಿಯೇ ನಿಲ್ಲುವುದರಿಂದ ಶುಚಿತ್ವ ಕಾಣೆಯಾಗಿದೆ.<br /> <br /> <strong>ಬೀದಿ ದೀಪಗಳೇ ಇಲ್ಲ: </strong>ಕೆಲ ಲೈಟು ಕಂಬಗಳಲ್ಲಿ ಬೀದಿ ದೀಪಗಳಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಇದ್ದರೂ, ಅವು ಹತ್ತುತ್ತಿಲ್ಲ. ಈ ಕುರಿತು ಹಲವಾರು ಬಾರಿಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.<br /> <br /> ಮೂಲಸೌಕರ್ಯ ಒದಗಿಸುವಂತೆ ಕೆಲವು ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದೇವು. ಕೆಲವು ಕಾಮಗಾರಿಗಳಲ್ಲಿ ಆದ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಝಾಕಿರ್ ಹುಸೇನ್.<br /> ‘ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಎಲ್ಲಾ ಚರಂಡಿಗಳ ಹೂಳು ತೆಗೆಸಿ ಶುಚಿಗೊಳಿಸಲಾಗುವುದು. ಆದ್ಯತೆ ಮೇರೆಗೆ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎನ್ನುತ್ತಾರೆ ಪಿಡಿಒ ತಿಮ್ಮಾಚಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ: </strong>ಹೂಳು ತೆಗೆಯದ ಚರಂಡಿಗಳು, ನಿರ್ವಹಣೆ ಇಲ್ಲದ ಬೀದಿ ದೀಪಗಳು, ಡಾಂಬರು ಕಾಣದ ರಸ್ತೆ ಸೇರಿದಂತೆ ಹಲವು ಸಮಸ್ಯೆಗಳು ತಾಲ್ಲೂಕಿನ ಮಾಯಣ್ಣಗೌಡನ ಕೊಪ್ಪಲು ಪ್ರವೇಶಿಸುತ್ತಿದ್ದಂತೆಯೇ ಕಾಣುತ್ತವೆ.<br /> <br /> ತಾಲ್ಲೂಕಿನ ಕಸಬಾ ಹೋಬಳಿಯ ಪಾಲಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಣ್ಣಗೌಡನಕೊಪ್ಪಲು 75ಕ್ಕೂ ಅಧಿಕ ಮನೆಗಳಿದ್ದು, 500ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಮೂಲ ಸೌಕರ್ಯಗಳ ಕೊರತೆಯು ಈ ಚಿಕ್ಕ ಗ್ರಾಮವನ್ನು ಕಾಡುತ್ತಿದೆ.<br /> <br /> ಗ್ರಾಮವು ನಾಗಮಂಗಲ ಪಟ್ಟಣದ ಕೂಗಳತೆಯ ದೂರದಲ್ಲಿದೆ. ಬೆಂಗಳೂರು - ಜಲಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದರೂ, ಗ್ರಾಮದಲ್ಲಿ ಉತ್ತಮ ರಸ್ತೆಗಳಿಲ್ಲ. ಕೆಲವೆಡೆ ಚರಂಡಿಗಳಿದ್ದರೂ, ಹೂಳು ತೆಗೆಯಿಸಿಲ್ಲ. ಬೀದಿ ದೀಪಗಳಿದ್ದರೂ ಹೊತ್ತಿಕೊಳ್ಳದ್ದರಿಂದ ಕತ್ತಲಿನಲ್ಲಿಯೇ ತಿರುಗಾಡಬೇಕಾದ ಸ್ಥಿತಿ ಗ್ರಾಮಸ್ಥರದ್ದಾಗಿದೆ.<br /> <br /> <strong>ಹದಗೆಟ್ಟಿರುವ ರಸ್ತೆಗಳು: </strong>ಗ್ರಾಮದ ಬಹುತೇಕ ರಸ್ತೆಗಳು ಸರಿಯಾಗಿಲ್ಲ. ಮಳೆ ಬಂದರೆ ರಸ್ತೆಗಳು ಕೆಸರಿನ ಹೊಂಡಗಳಂತೆ ಮಾರ್ಪಾಟಾಗುತ್ತವೆ. ಚಿಕ್ಕ–ಪುಟ್ಟ ರಸ್ತೆಗಳೂ ಹಾಳಾಗಿವೆ. ವಾಹನಗಳು ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ಇದೆ.<br /> <br /> <strong>ತುಂಬಿ ತುಳುಕುತ್ತಿರುವ ಅನೈರ್ಮಲ್ಯ: </strong>ಗ್ರಾಮದ ಸುತ್ತ–ಮುತ್ತಲು ಬರೀ ಕಸವೋ ಕಸ. ನೀರಿನ ಟ್ಯಾಂಕ್ ಸಮೀಪ ಅಳವಡಿಸಿರುವ ನಲ್ಲಿಗಳಿಂದ ಬರುವ ನೀರು ಹೊರ ಹೋಗಲು ಚರಂಡಿ ವ್ಯವಸ್ಥೆಯಿಲ್ಲ.<br /> <br /> ಗ್ರಾಮದ ಕೆಲವು ಕಡೆಗಳಲ್ಲಿ ಚರಂಡಿಯನ್ನು ಹಳೆಯ ಕಾಲದಲ್ಲಿ ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದ್ದರಿಂದ ಹೂಳು ತುಂಬಿಕೊಂಡಿವೆ. ನೀರು ಹರಿಯದೆ ಅಲ್ಲಿಯೇ ನಿಲ್ಲುವುದರಿಂದ ಶುಚಿತ್ವ ಕಾಣೆಯಾಗಿದೆ.<br /> <br /> <strong>ಬೀದಿ ದೀಪಗಳೇ ಇಲ್ಲ: </strong>ಕೆಲ ಲೈಟು ಕಂಬಗಳಲ್ಲಿ ಬೀದಿ ದೀಪಗಳಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಇದ್ದರೂ, ಅವು ಹತ್ತುತ್ತಿಲ್ಲ. ಈ ಕುರಿತು ಹಲವಾರು ಬಾರಿಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.<br /> <br /> ಮೂಲಸೌಕರ್ಯ ಒದಗಿಸುವಂತೆ ಕೆಲವು ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದೇವು. ಕೆಲವು ಕಾಮಗಾರಿಗಳಲ್ಲಿ ಆದ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಝಾಕಿರ್ ಹುಸೇನ್.<br /> ‘ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಎಲ್ಲಾ ಚರಂಡಿಗಳ ಹೂಳು ತೆಗೆಸಿ ಶುಚಿಗೊಳಿಸಲಾಗುವುದು. ಆದ್ಯತೆ ಮೇರೆಗೆ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎನ್ನುತ್ತಾರೆ ಪಿಡಿಒ ತಿಮ್ಮಾಚಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>