ಸುದ್ದಿಗಾರರ ಜೊತೆ ಮಾತನಾಡಿ, ‘ಪ್ರವಾಸದ ಸಮಯದಲ್ಲಿ ರೈತರು, ಮಹಿಳೆಯರು, ಯುವಕರನ್ನು ಭೇಟಿ ಮಾಡಿದ್ದೇನೆ. ಎಲ್ಲರೂ ಬಹಳ ಪ್ರೀತಿಯಿಂದ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನನ್ನ ಜೊತೆ ಅಂಬರೀಷ್ ಅಭಿಮಾನಿಗಳು ಒತ್ತಾಸೆಯಾಗಿ ನಿಂತಿದ್ದಾರೆ. ಬಿಜೆಪಿ ಬೆಂಬಲ ನೀಡುವ ಕುರಿತು ಮುಖಂಡರು ಅಧಿಕೃತವಾಗಿ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಬೆಂಬಲ ನೀಡುವಂತೆ ಎಸ್.ಎಂ.ಕೃಷ್ಣ ಅವರಿಗೆ ಕೋರಿದ್ದೇನೆ. ಅದು ಕೂಡ ಶೀಘ್ರ ಗೊತ್ತಾಗಲಿದೆ’ ಎಂದರು.