ಅವರು ಸುಮಾರು 30 ನಿಮಿಷಗಳ ಕಾಲ ದೇವಾಲಯದಲ್ಲಿ ಇದ್ದರು. ಪಡಿತರ ವಿತರಕರ ಸಂಘದ ರಾಜ್ಯ ಘಟಕ ಅಧ್ಯಕ್ಷ ಟಿ.ಕೃಷ್ಣಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ದೇವರಾಜು, ಬಿಜೆಪಿ ಸ್ಥಳೀಯ ಮುಖಂಡರಾದ ಜಿ.ಉಮಾಶಂಕರ್, ಕೆ.ಆರ್.ಸೊಸೈಟಿ ಉಪಾಧ್ಯಕ್ಷ ಉಮೇಶಕುಮಾರ್, ಪುಟ್ಟರಾಮು ಇದ್ದರು.
ಮೋದಿ ಅವರ ತಂಡ ಸಮೀಪದ ಚಂದ್ರವನ ಆಶ್ರಮಕ್ಕೆ ಭೇಟಿ ನೀಡಿತ್ತು. ಬೇಬಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಜತೆ ಕೆಲಕಾಲ ಚರ್ಚಿಸಿದರು.ಆಶ್ರಮದಲ್ಲಿ ಕಾಫಿ ಸೇವಿಸಿದ ತಂಡ ನಂತರ ಮೈಸೂರು ಕಡೆಗೆ ತೆರಳಿತು.