ಇದಕ್ಕೂ ಮುನ್ನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದ ಯುವಕನ ಆರೋಗ್ಯವನ್ನು, ಅಲ್ಲಿನ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ರವೀಶ್ ತಪಾಸಣೆ ಮಾಡಿದ್ದರು. ನಂತರ ಮರುದಿನವೇ ಅಲ್ಲಿಂದ ಸೇಂಟ್ ಮೇರಿಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ರವೀಶ್, ‘ಈ ಕುರಿತು ತಮಗೇನೂ ಗೊತ್ತಿಲ್ಲ. ಆದರೆ, ಒಂದೆರಡು ದಿನಗಳಲ್ಲಿ ಇಂತಹುದೇ ಮಾನಸಿಕ ಸಮಸ್ಯೆ ಎಂದು ನಿರ್ಧರಿಸಲಾಗದು’ ಎಂದು ತಿಳಿಸಿದರು.