ಮೈಸೂರು: ಜಿಲ್ಲೆಯ ವಿವಿಧೆಡೆ ಉತ್ತಮ ಸೇವೆ ಸಲ್ಲಿಸುತ್ತಿರುವ 26 ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಿದೆ.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನದ ಅಂಗವಾಗಿ ಸೆ.5ರ ಶನಿವಾರ, ಜಿಲ್ಲಾಡಳಿತ ಆಯೋಜಿಸಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಈ ಎಲ್ಲರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿ ಪುರಸ್ಕೃತರ ವಿವರ
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಕೆ.ಪುಟ್ಟರಾಜು, ಎಚ್.ಡಿ.ಹುಂಡಿ, ಬೋಗಾದಿ, ಬಿ.ಬಸವರಾಜು, ನೆಲ್ಲೂರ್ಶೆಡ್, ಮೈಸೂರು ದಕ್ಷಿಣ ವಲಯ, ಎಚ್.ಪಿ.ಶಶಿಧರ, ಕೇತಹಳ್ಳಿ, ತಿ.ನರಸೀಪುರ ತಾಲ್ಲೂಕು, ಎನ್.ಮಂಜುಳಾ, ತೊರೆಮಾವು ನಂಜನಗೂಡು ತಾಲ್ಲೂಕು, ಕೆ.ಎಸ್.ಗಿರೀಶ್ಕುಮಾರ್, ಗೆಜ್ಜಯ್ಯನ ವಡ್ಡರಗುಡಿ, ಹುಣಸೂರು ತಾಲ್ಲೂಕು.
ರಹಮತ್ ಉನ್ನೀಸಾ, ಎ.ಜೆ.ಬ್ಲಾಕ್, ಉತ್ತರ ವಲಯ, ಎಸ್.ವಿ.ಕೃಷ್ಣ, ಲಕ್ಕಿಕುಪ್ಪೆಕೊಪ್ಪಲು, ಹೊನ್ನೇನಹಳ್ಳಿ ಕ್ಲಸ್ಟರ್, ಕೆ.ಆರ್. ನಗರ ತಾಲ್ಲೂಕು, ಕೆ.ಎಚ್.ನಾಗರಾಜು, ಭಾರತೀ ನಗರ, ಪಿರಿಯಾಪಟ್ಟಣ ತಾಲ್ಲೂಕು, ಎಚ್.ಸುಧಾ, ಸೊಳ್ಳೆಪುರ ಹಾಡಿ, ಎಚ್.ಡಿ.ಕೋಟೆ ಕ್ಲಸ್ಟರ್.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಆರ್.ಕುಮುದಾ, ಪುಟ್ಟೇಗೌಡನ ಹುಂಡಿ, ವರುಣಾ ಹೋಬಳಿ, ಎಚ್.ಮಹದೇವು, ದೇವರಾಜ, ಶಿವರಾಮಪೇಟೆ, ಮೈಸೂರು ದಕ್ಷಿಣ ವಲಯ, ಎಂ.ಮಹದೇವ, ಕುಪ್ಯ, ತಿ.ನರಸೀಪುರ ತಾಲ್ಲೂಕು, ಮೀನಾಕ್ಷಿ, ಆಲಂಬೂರು, ನಂಜನಗೂಡು ತಾಲ್ಲೂಕು.
ಬಿ.ಜೆ.ಶಿಲ್ಪಾ, ಚೋಳೇನಹಳ್ಳಿ, ಹುಣಸೂರು ತಾಲ್ಲೂಕು, ಎ.ಕೆ.ಗುಣವತಿ, ಹುಡ್ಕೋ, ಬನ್ನಿಮಂಟಪ ಉತ್ತರ ವಲಯ, ಬ.ನಾಗರತ್ನಾ, ತಂದ್ರೆ, ಕೆ.ಆರ್.ನಗರ ತಾಲ್ಲೂಕು, ಕೆ.ಬಿ.ಚಂದ್ರಶೇಖರ, ಮಾಕೋಡು, ಪಿರಿಯಾಪಟ್ಟಣ ತಾಲ್ಲೂಕು, ಪಿ.ಸಂತೋಷ್ ಕುಮಾರ್ ಪೂಜಾರಿ, ಬೊಪ್ಪನಹಳ್ಳಿ, ಮಾದಾಪುರ ಕ್ಲಸ್ಟರ್.
ಪ್ರೌಢಶಾಲಾ ವಿಭಾಗ: ಡಿ.ಸಿ.ಕವಿತಾ, ಬೀರಿಹುಂಡಿ, ಎಚ್.ಎಸ್.ತಿಪ್ಪೇಸ್ವಾಮಿ, ಡಿ.ಬನುಮಯ್ಯ ಬಾಲಕಿಯರ ಪ್ರೌಢಶಾಲೆ, ಮೈಸೂರು ದಕ್ಷಿಣ ವಲಯ, ಸಿ.ಪುಟ್ಟಸ್ವಾಮಿ, ತಿ.ನರಸೀಪುರ ತಾಲ್ಲೂಕು, ಆರ್.ವಿ.ಸುನೀಲ್ಕುಮಾರ್, ನವಿಲೂರು, ನಂಜನಗೂಡು ತಾಲ್ಲೂಕು, ಎಂ.ಬಿ.ನಾಗರಾಜು, ಪೀಪಲ್ಸ್ ಪಾರ್ಕ್, ಉತ್ತರ ವಲಯ, ಎಚ್.ಎಸ್.ಸುಗುಣಾ, ಹಂಪಾಪುರ, ಎಚ್.ಡಿ.ವಾಸು, ಬೈಲುಕುಪ್ಪೆ, ಪಿರಿಯಾಪಟ್ಟಣ ತಾಲ್ಲೂಕು, ಕೆ.ಸಂಗೀತಾ, ಸರಗೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.