ನಿಂಬೆಹಣ್ಣಿನ ಆರತಿ, ಬೆಲ್ಲದಾರತಿ, ಕುಂಕುಮ ನೀಡುವುದು, ಕಾಣಿಕೆ ಅರ್ಪಿಸುವುದು ಹೀಗೆ ಭಕ್ತರು ಮನಸ್ಸಿನಲ್ಲಿ ಅಂದುಕೊಂಡ ಹರಕೆಗಳನ್ನು ಒಪ್ಪಿಸಿದರು. ಗರ್ಭಗುಡಿಯಲ್ಲಿ ‘ಲಕ್ಷ್ಮೀ’ ಅಲಂಕಾರದಿಂದ ಕಂಗೊಳಿಸುತ್ತಿದ್ದ ಮೂರ್ತಿಗೆ ಒಂದರೆಕ್ಷಣ ಕೈಮುಗಿದು ಧನ್ಯರಾದೆವು ಎಂದುಕೊಂಡರು. ಮತ್ತೆ ಹಲವರು ಆವರಣದಲ್ಲಿಟ್ಟಿದ್ದ ಉತ್ಸವಮೂರ್ತಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿದರು.