ವಾರ್ಡ್ ನಂ. 23ರ ನಗರಪಾಲಿಕೆ ಸದಸ್ಯೆ ಹಾಗೂ ಮೇಯರ್ ಭಾಗ್ಯವತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬಡಾವಣೆ ವೀಕ್ಷಿಸಿದ ಅವರು ಸಾರ್ವಜನಿಕರಿಂದ ದೂರು ಸ್ವೀಕರಿಸಿದರು. ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ತೆರವುಗೊಳಿಸುತ್ತಿಲ್ಲ. ಅಲ್ಲದೇ, ಈ ಕಸವು ಚರಂಡಿಗೆ ಸಿಲುಕುತ್ತಿದ್ದು, ಮಳೆನೀರು ಸರಾಗವಾಗಿ ಹರಿಯದೇ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದರು.