ಮೈಸೂರು: ನಗರದಲ್ಲಿ ಸೋಮವಾರ ಬೆಳಿಗ್ಗೆ ಕೆಲವೊಂದು ಹೋಟೆಲ್ ಗಳು ತೆರೆದಿದ್ದು, ಪಾರ್ಸಲ್ ನೀಡಲು ಮಾತ್ರ ಅವಕಾಶ ನೀಡಲಾಗಿದೆ.
ಮಾಂಸದಂಗಡಿ ತೆರೆಯಲು ಭಾನುವಾರದಿಂದಲೆ ಅನುಮತಿ ನೀಡಲಾಗಿದೆ. ನಿತ್ಯ ಇವುಗಳು ತೆರೆದಿದ್ದು, ಸಾರ್ವಜನಿಕರು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಹಾಸ್ಟೆಲ್, ಪಿ.ಜಿ ಸೇರಿದಂತೆ ಎಲ್ಲ ಬಗೆಯ ವಿದ್ಯಾರ್ಥಿ ನಿಲಯಗಳು ತಮ್ಮಲ್ಲಿರುವವರಿಗೆ ಆಹಾರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೂಚನೆ ನೀಡಿದ್ದಾರೆ.
ಇಂದಿನಿಂದ ಜನರ ಮನೆ ಬಾಗಿಲಿಗೆ ರಿಯಾಯಿತಿ ದರದಲ್ಲಿ ದಿನಸಿ ಒದಗಿಸುವ ಕಾರ್ಯಕ್ಕೆ ಪಾಲಿಕೆ ಕೈ ಹಾಕಿದ್ದು, ಪ್ರಾಯೋಗಿಕವಾಗಿ 3 ವಾರ್ಡ್ ನಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.