ಒಂದು ಮನೆಯೊಳಗೆ ಸಾವಿರಾರು ಸಂಖ್ಯೆಯಲ್ಲಿ ಮತದಾರರ ಗುರುತಿನ ಚೀಟಿಗಳು ಸಿಗುವುದು ಇವರಿಗೆ ‘ಕ್ಷುಲ್ಲಕ’ವೆನ್ನಿಸಿದರೆ ಹೇಗೆ? ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಂಚು ಈ ಪ್ರಕರಣದ ಹಿಂದೆ ಇದೆ ಎಂಬುದು ಮುಖ್ಯಮಂತ್ರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಪ್ರಕರಣದ ಬಗ್ಗೆ ಇನ್ನೂ ತನಿಖೆಯನ್ನೇ ನಡೆಸಿಲ್ಲ. ಆದರೂ ಮುಖ್ಯಮಂತ್ರಿ, ‘ನಮ್ಮ ಅಭ್ಯರ್ಥಿ ಯಾವುದೇ ಆಕ್ರಮ ಎಸಗಿಲ್ಲ, ಚುನಾವಣೆ ನಡೆಸಲು ಅವಕಾಶ ಕೊಡಬಹುದಿತ್ತು’ ಎಂದಿದ್ದಾರೆ.