‘ಗಂಡ ಸತ್ತರೂ ಮಗಳನ್ನು ಬಿಕಾಂ ಓದಿಸಿಕೊಂಡು ಬಾಡಿಗೆ ಮನೆಯಲ್ಲಿದ್ದೆ. ಟೈಲರಿಂಗ್ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಯತ್ನ ನಡೆಸಿದ್ದೆ. ಉಕ್ಕೇರಿದ ಹೊಳೆ, ಮನೆಯ ಜತೆಗೆ ನಿತ್ಯ ಬಳಕೆಯ ಸಾಮಗ್ರಿಗಳನ್ನು ಆಪೋಷನ ತೆಗೆದುಕೊಂಡು, ನನ್ನನ್ನು ನಿರ್ಗತಿಕಳನ್ನಾಗಿಸಿ ಬೀದಿಗೆ ನಿಲ್ಲಿಸಿದೆ. ಭವಿಷ್ಯಕ್ಕೆ ಕತ್ತಲು ಕವಿದಂತಾಗಿದೆ’ ಎಂದು ಕವಿತಾ ಕಣ್ಣೀರಿಟ್ಟರು.