ಮೂರು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ರಂಗಾಯಣದ ಭಾಗವಾಗಿರುವ ಬ್ರಹ್ಮಲಿಂಗಪ್ಪ, ನಿತ್ಯವೂ ಗಿಡ–ಮರಗಳ ಕಾಳಜಿ ಮಾಡುತ್ತಾರೆ. ಅವಕಾಶ ಸಿಕ್ಕ ಕಡೆ ಸಸಿ ನೆಟ್ಟು ಬೆಳೆಸುತ್ತಾರೆ. ಯಾವುದಾದರೂ ಮರಕ್ಕೆ ರೋಗ ತಗುಲಿದರೆ, ಇವರ ಮನಸ್ಸೂ ಮುದುಡುತ್ತದೆ. ತಕ್ಷಣವೇ ಔಷಧೋಪಚಾರ ನಡೆಸಿ, ಗುಣಮುಖವಾಗುವ ತನಕವೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾರೆ.