ವಿಜಯದಶಮಿ ಹಬ್ಬಕ್ಕಾಗಿ ಮನೆಗೆ ಬಂದಿದ್ದ ಸಣ್ಣಮ್ಮ ಅವರೊಂದಿಗೆ ಮಂಜುನಾಥ್ ಹಾಗೂ ಈತನ ಪತ್ನಿ ಸೃಜನಾ ಆಸ್ತಿಯ ವಿಚಾರಕ್ಕೆ ಗಲಾಟೆ ಆರಂಭಿಸಿದ್ದಾರೆ. ಕೋಪದಲ್ಲಿ ಮಂಜುನಾಥ್ ದೊಣ್ಣೆಯಿಂದ ಹೊಡೆದಿದ್ದಾನೆ. ಏಟು ಕೆನ್ನೆಗೆ ಬಿದ್ದು ಸಣ್ಣಮ್ಮ ಮೃತಪಟ್ಟಿದ್ದಾರೆ. ಈ ಕುರಿತು ಮಂಜುನಾಥ್ ಹಾಗೂ ಈತನ ಪತ್ನಿ ಸೃಜನಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.