ನಾಗರಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮಿ ಇನಾಂದಾರ್ ಅವರು ವಿಶೇಷ ಅನುಮತಿಯನ್ನು ಪಡೆದು ಕಾಗದ ಹಾಗೂ ಇಂಕ್ ಅನ್ನು ಪೂರೈಸಲು ವ್ಯವಸ್ಥೆ ಮಾಡಿದರು. ಹಾಗಾಗಿ, ಸಂಜೆ 4ರ ಬಳಿಕ ಕಾರ್ಯಗಳು ಆರಂಭವಾದವು. ಆದರೂ ಬಹುತೇಕ ಮಂದಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದೇ ವಾಪಸಾದರು.