<p><strong>ಮೈಸೂರು:</strong> ಎನ್ಟಿಎಂ ಮಾದರಿ ಹೆಣ್ಣು ಮಕ್ಕಳ ಶಾಲೆ ಉಳಿವಿಗಾಗಿ ಬೃಹತ್ ರ್ಯಾಲಿ ನಡೆಸಲಾಗುವುದು ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದರು.</p>.<p>ಎನ್ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಭಾಗಿಯಾದ ಪ್ರಗತಿಪರ ಮಠಾಧೀಶರು ಹಾಗೂ ಪ್ರಗತಿಪರ ಚಿಂತಕರ ಒಕ್ಕೂಟದ ವತಿಯಿಂದ ಪಾಲ್ಗೊಂಡ ಅವರು ರಾಮಕೃಷ್ಣಾಶ್ರಮದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.</p>.<p>ಯೋಗ್ಯತೆ ಇದ್ದರೆ ಹೆಣ್ಣು ಮಕ್ಕಳಿಗಾಗಿ ಇಂತಹ ಒಂದು ಶಾಲೆ ತೆರೆಯಬೇಕು. ಆದರೆ, ಈ ಶಾಲೆಯನ್ನು ಉರುಳಿಸಿ ಅದರ ಮೇಲೆ ಸ್ಮಾರಕ ಕಟ್ಟುವುದು ಅವಿವೇಕ ಎಂದು ಹರಿಹಾಯ್ದರು.</p>.<p>ನಿರಂಜನ ಆಶ್ರಮದಲ್ಲಿ ಸಮಾಧಿ ಉರುಳಿಸಿ, ಸ್ಮಾರಕ ನಿರ್ಮಿಸಲಾಗುತ್ತಿದೆ. 45 ದಿನಗಳ ಪ್ರತಿಭಟನೆ ನೋಡಿಯಾದರೂ ಈ ಸ್ಮಾರಕದ ಗೊಡವೆ ಬೇಡ ಎಂದು ಹೋಗಬೇಕಿತ್ತು. ಇಲ್ಲವೇ ಇಂತಹ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಬೇಕಿತ್ತು. ಆದರೆ, ಶಾಲೆ ಮುಗಿಸುವ ಈ ಹಟ ಸರಿಯಲ್ಲ ಎಂದು ಟೀಕಿಸಿದರು.</p>.<p>ಕೇವಲ ಶಾಲೆ ಮಾತ್ರವಲ್ಲ ಪಕ್ಕದಲ್ಲಿರುವ ನಿರಂಜನ ಮಠವನ್ನೂ ಉಳಿಸಬೇಕಿದೆ. ಈ ಜಾಗವನ್ನು ಕಬಳಿಸುವ ಹುನ್ನಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.</p>.<p>ಶ್ರೀಕರ ಸವಿತನಂದಾ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಹೋರಾಟಗಾರರಾದ ಪುರುಷೋತ್ತಮ, ಮರಿದೇವಯ್ಯ, ಹರಿಹರ ಆನಂದಸ್ವಾಮಿ, ನಂಜರಾಜ ಅರಸ್, ಉಗ್ರನರಸಿಂಹೇಗೌಡ, ಮೋಹನ್ ಕುಮಾರ್ ಗೌಡ, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಕೊ.ಸೊ.ನರಸಿಂಹಮೂರ್ತಿ, ಅರವಿಂದ್ ಶರ್ಮಾ ಪ್ರತಿಭಟನೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಎನ್ಟಿಎಂ ಮಾದರಿ ಹೆಣ್ಣು ಮಕ್ಕಳ ಶಾಲೆ ಉಳಿವಿಗಾಗಿ ಬೃಹತ್ ರ್ಯಾಲಿ ನಡೆಸಲಾಗುವುದು ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದರು.</p>.<p>ಎನ್ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಭಾಗಿಯಾದ ಪ್ರಗತಿಪರ ಮಠಾಧೀಶರು ಹಾಗೂ ಪ್ರಗತಿಪರ ಚಿಂತಕರ ಒಕ್ಕೂಟದ ವತಿಯಿಂದ ಪಾಲ್ಗೊಂಡ ಅವರು ರಾಮಕೃಷ್ಣಾಶ್ರಮದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.</p>.<p>ಯೋಗ್ಯತೆ ಇದ್ದರೆ ಹೆಣ್ಣು ಮಕ್ಕಳಿಗಾಗಿ ಇಂತಹ ಒಂದು ಶಾಲೆ ತೆರೆಯಬೇಕು. ಆದರೆ, ಈ ಶಾಲೆಯನ್ನು ಉರುಳಿಸಿ ಅದರ ಮೇಲೆ ಸ್ಮಾರಕ ಕಟ್ಟುವುದು ಅವಿವೇಕ ಎಂದು ಹರಿಹಾಯ್ದರು.</p>.<p>ನಿರಂಜನ ಆಶ್ರಮದಲ್ಲಿ ಸಮಾಧಿ ಉರುಳಿಸಿ, ಸ್ಮಾರಕ ನಿರ್ಮಿಸಲಾಗುತ್ತಿದೆ. 45 ದಿನಗಳ ಪ್ರತಿಭಟನೆ ನೋಡಿಯಾದರೂ ಈ ಸ್ಮಾರಕದ ಗೊಡವೆ ಬೇಡ ಎಂದು ಹೋಗಬೇಕಿತ್ತು. ಇಲ್ಲವೇ ಇಂತಹ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಬೇಕಿತ್ತು. ಆದರೆ, ಶಾಲೆ ಮುಗಿಸುವ ಈ ಹಟ ಸರಿಯಲ್ಲ ಎಂದು ಟೀಕಿಸಿದರು.</p>.<p>ಕೇವಲ ಶಾಲೆ ಮಾತ್ರವಲ್ಲ ಪಕ್ಕದಲ್ಲಿರುವ ನಿರಂಜನ ಮಠವನ್ನೂ ಉಳಿಸಬೇಕಿದೆ. ಈ ಜಾಗವನ್ನು ಕಬಳಿಸುವ ಹುನ್ನಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.</p>.<p>ಶ್ರೀಕರ ಸವಿತನಂದಾ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಹೋರಾಟಗಾರರಾದ ಪುರುಷೋತ್ತಮ, ಮರಿದೇವಯ್ಯ, ಹರಿಹರ ಆನಂದಸ್ವಾಮಿ, ನಂಜರಾಜ ಅರಸ್, ಉಗ್ರನರಸಿಂಹೇಗೌಡ, ಮೋಹನ್ ಕುಮಾರ್ ಗೌಡ, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಕೊ.ಸೊ.ನರಸಿಂಹಮೂರ್ತಿ, ಅರವಿಂದ್ ಶರ್ಮಾ ಪ್ರತಿಭಟನೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>