ಮೈಸೂರು: ಜಮೀನನ್ನು ಸರ್ವೇ ಮಾಡಲು ₹ 8 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ತಾಲ್ಲೂಕು ಕಚೇರಿಯ ಭೂಮಾಪನ ಅಧಿಕಾರಿ ಹನುಂತರಾಯಪ್ಪ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇವರು ವ್ಯಕ್ತಿಯೊಬ್ಬರ ಜಮೀನನ್ನು ಸರ್ವೇ ಮಾಡಿಕೊಡಲು ₹ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ವ್ಯಕ್ತಿಯು ಈ ಸಂಬಂಧ ಎಸಿಬಿಯಲ್ಲಿ ದೂರು ದಾಖಲಿಸಿದ್ದರು. ₹ 8 ಸಾವಿರ ಹಣವನ್ನು ಕಚೇರಿಯಲ್ಲಿ ಪಡೆಯುತ್ತಿದ್ದ ವೇಳೆ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಎಸಿಬಿ ಎಸ್.ಪಿ.ಡಾ.ಸುಮನ್ ಡಿ.ಪನೇಕರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಚ್.ಪರಶುರಾಮಪ್ಪ, ಇನ್ಸ್ಪೆಕ್ಟರರ್ಗಳಾದ ಕರೀಂ ರಾವತ್ತಾರ್ ಮತ್ತು ನಿರಂಜನ್ ಕಾರ್ಯಾಚರಣೆ ನಡೆಸಿದ್ದರು.