<p><strong>ಮೈಸೂರು:</strong> ಆಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವಕ್ಕೆ ಮಂಗಳವಾರ ರಾತ್ರಿ ನಗರದ ಶಾಂತೀಶ್ವರಸ್ವಾಮಿ ಬಸದಿ (ಕೋಟೆ ಬಸದಿ)ಯಲ್ಲಿ ಚಾಲನೆ ನೀಡಲಾಯಿತು.</p>.<p>ಪದ್ಮಶ್ರೀ ಜೈನ ಮಹಿಳಾ ಸಮಾಜದ ಶೀಲಾ ಅನಂತರಾಜ್ ದೀಪ ಬೆಳಗಿಸುವ ಮೂಲಕ ಪರ್ವಕ್ಕೆ ಚಾಲನೆ ನೀಡಿದರು.</p>.<p>ನಿವೃತ್ತ ಮುಖ್ಯ ಎಂಜಿನಿಯರ್, ಪ್ರವಚನಕಾರ ಎ.ಆನಂದಕುಮಾರ್ ಮಾತನಾಡಿ ‘ಆತ್ಮದಲ್ಲಿ ಸಕಲ ಶಕ್ತಿ ಅಡಗಿದೆ. ಮೋಕ್ಷಕ್ಕೂ ಸನ್ಮಾರ್ಗ ತೋರಲಿದೆ. ಮೋಕ್ಷ ಪ್ರಾಪ್ತಿಯ ಶಕ್ತಿ ನಮ್ಮಲ್ಲೇ ಅಡಗಿದ್ದು, ಚೈತನ್ಯ ಶಕ್ತಿಯ ಮೂಲಕ ಅದನ್ನು ಕಂಡುಕೊಳ್ಳಬೇಕಿದೆ’ ಎಂದರು.</p>.<p>‘ಸುಖ–ದುಃಖ ಜೀವದ್ರವ್ಯಕ್ಕೆ ಸಂಬಂಧಿಸಿದ್ದು. ದ್ರವ್ಯ ಮತ್ತು ಗುಣ ಶಕ್ತಿಯ ರೂಪದಲ್ಲಿದೆ. ಇಂದು ನಾವು ಕೇಳೋದು ಬೇರೆ. ಸ್ವೀಕರಿಸೋದು ಬೇರೆ ಎಂಬಂತಹ ಬದುಕು ಸಾಗಿಸುತ್ತಿದ್ದೇವೆ. ಇದಲ್ಲ ಜೀವನ’ ಎಂದು ಹೇಳಿದರು.</p>.<p>‘ಜೀವ ಇರೋದೇ ಚೈತನ್ಯ ಶಕ್ತಿ. ಚೈತನ್ಯ ಇಲ್ಲದಿರುವುದೇ ಅಜೀವ ಶಕ್ತಿ. ಚೈತನ್ಯ ಶಕ್ತಿಗೆ ನೋಡುವ–ತಿಳಿಯುವ ಶಕ್ತಿಯಿದೆ. ಜೀವ ಇರೋ ತನಕ ಲವಲವಿಕೆಯಿಂದ ಬದುಕಬೇಕು. ಪಂಚೇಂದ್ರೀಯ ಆತ್ಮಕ್ಕೆ ಸಂಬಂಧಿಸಿದವು’ ಎಂದರು.</p>.<p>ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ಕುಮಾರ್, ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ನ ಎಸ್.ಬಿ.ಸುರೇಶ್ ಜೈನ್, ಸೇವಾರ್ಥದಾರರಾದ ವಿದ್ಯಾರಣ್ಯಪುರಂನ ಪದ್ಮಾ ಧನ್ಯಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಆಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವಕ್ಕೆ ಮಂಗಳವಾರ ರಾತ್ರಿ ನಗರದ ಶಾಂತೀಶ್ವರಸ್ವಾಮಿ ಬಸದಿ (ಕೋಟೆ ಬಸದಿ)ಯಲ್ಲಿ ಚಾಲನೆ ನೀಡಲಾಯಿತು.</p>.<p>ಪದ್ಮಶ್ರೀ ಜೈನ ಮಹಿಳಾ ಸಮಾಜದ ಶೀಲಾ ಅನಂತರಾಜ್ ದೀಪ ಬೆಳಗಿಸುವ ಮೂಲಕ ಪರ್ವಕ್ಕೆ ಚಾಲನೆ ನೀಡಿದರು.</p>.<p>ನಿವೃತ್ತ ಮುಖ್ಯ ಎಂಜಿನಿಯರ್, ಪ್ರವಚನಕಾರ ಎ.ಆನಂದಕುಮಾರ್ ಮಾತನಾಡಿ ‘ಆತ್ಮದಲ್ಲಿ ಸಕಲ ಶಕ್ತಿ ಅಡಗಿದೆ. ಮೋಕ್ಷಕ್ಕೂ ಸನ್ಮಾರ್ಗ ತೋರಲಿದೆ. ಮೋಕ್ಷ ಪ್ರಾಪ್ತಿಯ ಶಕ್ತಿ ನಮ್ಮಲ್ಲೇ ಅಡಗಿದ್ದು, ಚೈತನ್ಯ ಶಕ್ತಿಯ ಮೂಲಕ ಅದನ್ನು ಕಂಡುಕೊಳ್ಳಬೇಕಿದೆ’ ಎಂದರು.</p>.<p>‘ಸುಖ–ದುಃಖ ಜೀವದ್ರವ್ಯಕ್ಕೆ ಸಂಬಂಧಿಸಿದ್ದು. ದ್ರವ್ಯ ಮತ್ತು ಗುಣ ಶಕ್ತಿಯ ರೂಪದಲ್ಲಿದೆ. ಇಂದು ನಾವು ಕೇಳೋದು ಬೇರೆ. ಸ್ವೀಕರಿಸೋದು ಬೇರೆ ಎಂಬಂತಹ ಬದುಕು ಸಾಗಿಸುತ್ತಿದ್ದೇವೆ. ಇದಲ್ಲ ಜೀವನ’ ಎಂದು ಹೇಳಿದರು.</p>.<p>‘ಜೀವ ಇರೋದೇ ಚೈತನ್ಯ ಶಕ್ತಿ. ಚೈತನ್ಯ ಇಲ್ಲದಿರುವುದೇ ಅಜೀವ ಶಕ್ತಿ. ಚೈತನ್ಯ ಶಕ್ತಿಗೆ ನೋಡುವ–ತಿಳಿಯುವ ಶಕ್ತಿಯಿದೆ. ಜೀವ ಇರೋ ತನಕ ಲವಲವಿಕೆಯಿಂದ ಬದುಕಬೇಕು. ಪಂಚೇಂದ್ರೀಯ ಆತ್ಮಕ್ಕೆ ಸಂಬಂಧಿಸಿದವು’ ಎಂದರು.</p>.<p>ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ಕುಮಾರ್, ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ನ ಎಸ್.ಬಿ.ಸುರೇಶ್ ಜೈನ್, ಸೇವಾರ್ಥದಾರರಾದ ವಿದ್ಯಾರಣ್ಯಪುರಂನ ಪದ್ಮಾ ಧನ್ಯಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>