ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬಾತ್‌ ಹಂಚಿಕೆಗೆ ಸಿಗದ ಅವಕಾಶ

Last Updated 16 ಡಿಸೆಂಬರ್ 2018, 14:46 IST
ಅಕ್ಷರ ಗಾತ್ರ

ಮೈಸೂರು: ಕೆ.ಆರ್‌.ಆಸ್ಪತ್ರೆಯ ರೋಗಿಗಳಿಗೆ ಟೊಮೆಟೊ ಬಾತ್‌ ವಿತರಿಸಲು ಬಂದಿದ್ದ ನಗರಪಾಲಿಕೆ ಸ‌ದಸ್ಯ ಲೋಕೇಶ್‌ ಅವರನ್ನು ಪೊಲೀಸರು ತಡೆದು ವಾಪಸು ಕಳುಹಿಸಿದರು.

ವಿಷಪೂರಿತ ಪ್ರಸಾದ ಸೇವಿಸಿ ಈಗಾಗಲೇ ಹಲವರು ಅಸ್ವಸ್ಥರಾಗಿದ್ದಾರೆ. ದೇವಸ್ಥಾನದಲ್ಲೂ ಟೊಮೆಟೊ ಬಾತ್‌ ನೀಡಲಾಗಿತ್ತು. ಈಗ ಮತ್ತೆ ಟೊಮೆಟೊ ಬಾತ್‌ ಹಂಚುವುದು ಬೇಡ. ಬೇಕಿದ್ದಲ್ಲಿ, ಬಾಳೆಹಣ್ಣನ್ನು ರೋಗಿಗಳಿಗೆ ಹಂಚಿರಿ ಎಂದು ಪೊಲೀಸರು ಲೋಕೇಶ್‌ ಅವರಿಗೆ ಸೂಚಿಸಿದರು.

ಆಸ್ಪತ್ರೆಯ ಸಿಬ್ಬಂದಿ ಈ ಆಹಾರ ‍ಪದಾರ್ಥವನ್ನು ಪರಿಶೀಲಿಸಬೇಕು. ಬಳಿಕವಷ್ಟೇ ಹಂಚಬಹುದು ಎಂದು ತಿಳಿಸಿದರು. ಆದರೆ, ಆಸ್ಪತ್ರೆಯ ವೈದ್ಯರು ಆಹಾರ ವಿತರಣೆಗೆ ಅವಕಾಶ ನೀಡಲಾಗದು ಎಂದು ತಿಳಿಸಿದರು. ಬಳಿಕ ಲೋಕೇಶ್‌ ಟೊಮೆಟೊ ಬಾತನ್ನು ವಾಪಸು ತೆಗೆದುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT